ಪ್ರಸ್ತುತ ದಿನಗಳಲ್ಲಿ ಕಪ್ಪು-ಬಿಳುಪಿನ ಹೆಣ್ಣಿನ ಕಥೆಗಳು ಕಿರುತೆರೆಯಲ್ಲಿ ಸಹಜವಾಗಿದೆ. ಆದರೆ ಈಗ ಕಿರುತೆರೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಪ್ಪು ಹುಡುಗನ ಮನಸ್ಥಿತಿ, ಅವನಿಗಾಗುವ ಅವಮಾನ, ಖಿನ್ನತೆಯಿಂದ ಹೊರಬರುವ ಕಥೆ ತರಲಿದೆ ಉದಯ ಟಿವಿ. ದಪ್ಪ ದೇಹ...
ಆರ್.ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ಹಲವು ವಿಶೇಷಗಳಿಂದ ಕೂಡಿದೆ. ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿರುವ ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ...
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ‘ವೇದ’ ಚಿತ್ರಮಂದಿರದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದು ಗೊತ್ತೇ ಇದೆ. ಚಿತ್ರಮಂದಿರದಲ್ಲಿ ಸೂಪರ್ ಸಕ್ಸಸ್ ಕಂಡ ಸಿನಿಮಾ ಫೆಬ್ರವರಿ 10ರಂದು ZEE5ನಲ್ಲಿ ಬಿಡುಗಡೆಗೊಂಡು ಇಲ್ಲಿಯೂ ಹೊಸ ದಾಖಲೆ...
ಮಾರ್ಚ್ 4, 2023 ರಂದು ಗಾರ್ಡನ್ ಸಿಟಿಯಲ್ಲಿನಡೆಯಲಿರುವ ಸಿಸಿಎಲ್ 2023 ಪಟ್ಟಿಯಲ್ಲಿಅಗ್ರಸ್ಥಾನ ಪಡೆಯುವ ಪ್ರಯತ್ನದಲ್ಲಿ ತೆಲುಗು ವಾರಿಯರ್ಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ಕ್ರಮವಾಗಿ ಪಂದ್ಯಗಳನ್ನು ಆಡಲಿವೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಜೈಪುರದಿಂದ ಬೆಂಗಳೂರಿಗೆ ತನ್ನ...
ಜೈಪುರದಲ್ಲಿ ನಡೆದ ಸಿಸಿಎಲ್ 2023 ರ 7 ನೇ ಪಂದ್ಯದಲ್ಲಿ ಕೇರಳ ಸ್ಟ್ರೈಕರ್ಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ನಡೆದ ಸಿಸಿಎಲ್ 2023 ರ 7 ನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಗೆಲುವು ದಾಖಲಿಸಿದೆ. ಉಭಯ ತಂಡಗಳ ಆಟಗಾರರ ಅದ್ಭುತ ಪ್ರದರ್ಶನದೊಂದಿಗೆ ಪಂದ್ಯವು ಅದ್ಭುತವಾಗಿತ್ತು. ಆಟವು ಮನರಂಜನೆಯಿಂದ ಕೂಡಿತ್ತು ಮತ್ತು ಸಂಪೂರ್ಣ ಹೊಸ ಸ್ವರೂಪದಲ್ಲಿ ಕ್ರಿಕೆಟ್ ಮೋಜಿನ ಶಕ್ತಿಕೇಂದ್ರವಾಗಿತ್ತು. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಲಾ 10 ಓವರ್ಗಳ 2 ಇನ್ನಿಂಗ್ ಗಳ ಟಿ 20 ಪಂದ್ಯವನ್ನು ಆಡಲಾಗುತ್ತಿದೆ. ಸಿಸಿಎಲ್ 2023 ಕಿರೀಟಕ್ಕಾಗಿ ಆಯಾ ಚಲನಚಿತ್ರ ಉದ್ಯಮಗಳನ್ನು ಪ್ರತಿನಿಧಿಸುವ 8 ತಂಡಗಳ (ತೆಲುಗು ವಾರಿಯರ್ಸ್, ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಬೆಂಗಾಲ್ ಟೈಗರ್ಸ್, ಭೋಜ್ಪುರಿ ದಬಾಂಗ್ಸ್, ಮುಂಬೈ ಹೀರೋಸ್ ಮತ್ತು ಪಂಜಾಬ್ ಡಿ ಶೇರ್) ಸಿನಿ ತಾರೆಯರೊಂದಿಗೆ ಹೊಸ ಸ್ವರೂಪವು ಹೆಚ್ಚು ಕ್ರಿಕೆಟ್, ಹೆಚ್ಚು ಮನರಂಜನೆ ಮತ್ತು ಹೆಚ್ಚು ಮೋಜು ನೀಡುತ್ತದೆ. ಪಂದ್ಯ 7: ಕೇರಳ ಸ್ಟ್ರೈಕರ್ಸ್ ವರ್ಸಸ್ ಕರ್ನಾಟಕ ಬುಲ್ಡೋಜರ್ಸ್ ಕೇರಳ ಸ್ಟ್ರೈಕರ್ಸ್ ಆಡುವ ಹನ್ನೊಂದರ ಬಳಗ: ರಾಜೀವ್ ಪಿಳ್ಳೈ (ವಿಕೆ), ಉನ್ನಿ ಮುಕುಂದನ್ (ಸಿ), ಅರ್ಜುನ್ ನಂದಕುಮಾರ್, ಸಿದ್ಧಾರ್ಥ್ ಮೆನನ್, ಮಣಿಕುಟ್ಟನ್, ವಿಜಯ್ ಯೇಸುದಾಸ್, ಶಫೀಕ್ ರಹಮಾನ್, ವಿವೇಕ್ ಗೋಪನ್, ವಿನು ಮೋಹನ್, ಪ್ರಜೋದ್ ಕಲಾಭವನ್, ಜೀನ್ ಪಾಲ್ ಲಾಲ್. ಕರ್ನಾಟಕ ಬುಲ್ಡೋಜರ್ಸ್ ಆಡುವ ಹನ್ನೊಂದರ ಬಳಗ : ಪ್ರದೀಪ್ ಬೋಗಾದಿ (ನಾಯಕ), ರಾಜೀವ್ ಹನು, ಕಿಚ್ಚ ಸುದೀಪ್ (ವಿಕೆಟ್ ಕೀಪರ್), ಗಣೇಶ್, ಕೃಷ್ಣ, ಜಯರಾಮ್ ಕಾರ್ತಿಕ್, ಕರಣ್ ಅರಿಯನ್, ಚಂದನ್ ಕುಮಾರ್, ನಿರೂಪ್ ಭಂಡಾರಿ, ಪೆಟ್ರೋಲ್ ಪ್ರಸನ್ನ, ಬಚ್ಚನ್. ಟಾಸ್ ಗೆದ್ದ ಕೇರಳ ಸ್ಟ್ರೈಕರ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕನ್ನಡ ಮತ್ತು ಮಲಯಾಳಂ ಚಿತ್ರೋದ್ಯಮದ ಸ್ಟಾರ್ ಆಟಗಾರರು ಆಯಾ ತಂಡಗಳ ಪರ ಕಣಕ್ಕಿಳಿದರು. ಕರ್ನಾಟಕ ಬುಲ್ಡೋಜರ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿರುವ ಖ್ಯಾತ ನಟಿ ಸಪ್ತಮಿ ಗೌಡ (ಕಾಂತಾರ) ತಂಡವನ್ನು ಹುರಿದುಂಬಿಸಲು ಹಾಜರಿದ್ದರು ಮತ್ತು ನಟಿ ದೀಪ್ತಿ ಸತಿ ಮತ್ತು ಇತರರು ಕೇರಳ ಸ್ಟ್ರೈಕರ್ಸ್ ತಂಡವನ್ನು ಹುರಿದುಂಬಿಸಿದರು. ಮುಖ್ಯಾಂಶಗಳು: ಕೇರಳ ಸ್ಟ್ರೈಕರ್ಸ್ ಮೊದಲ ಇನಿಂಗ್ಸ್ : ಕೇರಳ ಸ್ಟ್ರೈಕರ್ಸ್ ತಂಡ ನಿಗದಿತ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತು. ರಾಜೀವ್ ಪಿಳ್ಳೈ 54 ರನ್ ಗಳಿಸಿದರೆ, ಉನ್ನಿ ಮುಕುಂದನ್ 19 ರನ್ ಗಳಿಸಿದರು. ಕರಣ್ ಅರ್ಯಾನ್ 2 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರು. ಪ್ರತ್ಯುತ್ತರದಲ್ಲಿ: ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನಿಂಗ್ಸ್: ಕರ್ನಾಟಕ ಬುಲ್ಡೋಜರ್ಸ್ ತಂಡ ನಿಗದಿತ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಈ ಮೂಲಕ 23 ರನ್ ಮುನ್ನಡೆ ಗಳಿಸಿತು. ನಾಯಕ ಪ್ರದೀಪ್ ಬೋಗಾದಿ 59 ರನ್ ಗಳಿಸಿದರೆ, ಆರಂಭಿಕ ಜತೆಗಾರ ಕೃಷ್ಣ 20 ರನ್ ಗಳಿಸಿದರು. 2ನೇ ಇನಿಂಗ್ಸ್ ನಲ್ಲಿ ಕೇರಳ ಸ್ಟ್ರೈಕರ್ಸ್ 2ನೇ ಇನಿಂಗ್ಸ್ : ರಾಜೀವ್ ಪಿಳ್ಳೈ ಅವರು 18 ಎಸೆತಗಳಲ್ಲಿ ಅಜೇಯ 43 ರನ್ ಗಳ ನೆರವಿನಿಂದ ಕೇರಳ ಸ್ಟ್ರೈಕರ್ಸ್ ತಂಡ ನಿಗದಿತ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು. ಈ ಮೂಲಕ ಕರ್ನಾಟಕ ತಂಡಕ್ಕೆ 83 ರನ್ ಗುರಿ ಒಡ್ಡಿತು. ಕರ್ನಾಟಕ ತಂಡಕ್ಕೆ 83 ರನ್ ಗೆಲುವಿನ ಗುರಿ 83 ರನ್ ಗಳ ಗುರಿ ಬೆನ್ನತ್ತಿದ ಕರ್ನಾಟಕ ಬುಲ್ಡೋಜರ್ಸ್ ತಂಡ 7ನೇ ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 86 ರನ್ ಗಳಿಸುವ ಮೂಲಕ 8 ವಿಕೆಟ್ ಗಳ ಜಯ ಸಾಧಿಸಿತು. ಫಲಿತಾಂಶ: ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 8 ವಿಕೆಟ್ ಗಳ ಜಯ. ಪಂದ್ಯಶ್ರೇಷ್ಠ: ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಪ್ರದೀಪ್ ಬೋಗಾದಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.