Cinema News
‘ಯುವರತ್ನ’ದಲ್ಲಿ ಬೆಂಗಳೂರು ಡಿಸಿಯಾದ ಧೂದ್ ಪೇಡಾ ದಿಗಂತ್!!

ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದಲ್ಲಿ ಧನಂಜಯ, ಪ್ರಕಾಶ್ ರಾಜ್ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದು ಆ ಸಾಲಿಗೆ ಹೊಸ ಸೇರ್ಪಡೆ ದಿಗಂತ್ ಮಂಚಾಲೆ.
ಹೌದು, ಈ ಚಿತ್ರದಲ್ಲಿ ಅವರು ಪುನೀತ್ ಅವರ ಸ್ನೇಹಿತನಾಗಿ ಬೆಂಗಳೂರಿನ ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ..

ದಿಗಂತ್ ಅವರ ಪಾತ್ರ ಬಹಳ ವಿಶೇಷವಾಗಿರಲಿದ್ದು, ಅವರ ಅಭಿಮಾನಿಗಳು ಖಂಡಿತಾ ಇಷ್ಟಪಡುತ್ತಾರೆ. ಈಗಾಗಲೇ 45 ದಿನದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸದ್ಯದಲ್ಲೇ ಮುಂದಿನ ಶೆಡ್ಯೂಲ್ನ್ನು ಆರಂಭಿಸಲಿದೆ.
ಈ ಶೆಡ್ಯೂಲ್ ನಲ್ಲಿ ಧನಂಜಯ, ಪ್ರಕಾಶ್ ರಾಜ್, ಸೋನುಗೌಡ ಸೇರಿದಂತೆ ಸಾಕಷ್ಟು ಮಂದಿ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿಕೊಂಡು, ಧಾರವಾಡಕ್ಕೆ ಮತ್ತೆ ಹೋಗಲಿದ್ದಾರಂತೆ ನಿರ್ದೇಶಕ ಸಂತೋಷ್ ಆನಂದ್ ರಾಮ್.


Continue Reading