Connect with us

Cinema News

ಬಾಲ್ಯ ನೆನಪಿಸುವ ಆಡೋಕೆ ಸಾವಿರ ಆಟ…ಇದು ಸಂಭ್ರಮ ಸಿನಿಮಾದ ಮೊದಲ ಹಾಡಿನ ನೋಟ

Published

on

ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ಅನಿಲ್ ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿಬಂದಿರುವ ಸಂಭ್ರಮ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಆಡೋಕೆ ಸಾವಿರ ಆಟ ಎಂಬ ಸಾಹಿತ್ಯವಿರುವ ಹಾಡು ನಿಮ್ಮ ಬಾಲ್ಯವನ್ನು ನೆನಪಿಸುತ್ತದೆ. ಬಾಲ್ಯದಲ್ಲಿ ಆಡಿದ ಆಟ, ತರಲೆಗಳು, ಶಾಲೆಯ ರಜಾ ಮಜಾ ಸವಿಯುವ ಕ್ಷಣವನ್ನು ಹಾಗೂ ಒಂದಷ್ಟು ಫಿಲಾಸಪಿ ಮತ್ತು ಹೆಚ್ಚು ನೆನಪುಗಳನು ನೆನಪಿಸುವ ಈ ಹಾಡಿಗೆ ನಿರ್ದೇಶಕ ಶ್ರೀ ಸಂಭ್ರಮ ಸಾಹಿತ್ಯ ಬರೆದಿದ್ದು, ಸೋನಲ್ ಶ್ರೀವತ್ಸವ್, ಅಭಿನವ್ ಭಟ್, ಅಪ್ರಮಿ, ಶ್ರೇಯ ಶ್ರೀರಂಗ, ಶಶಿಕಲಾ ಸುನಿಲ್, ಪೂರ್ಣಿಮಾ ಮಂಜುನಾಥ್, ದಿವ್ಯಾ ರಾಮಚಂದ್ರ ಧ್ವನಿಯಾಗಿದ್ದು, ಮನೋಮೂರ್ತಿ ಅದ್ಭುತ ಮ್ಯೂಸಿಕ್ ಹಾಡಿಗಿದೆ.

 

 

 

ರಂಗಭೂಮಿಯಲ್ಲಿ ಪಳಗಿರುವ ಪ್ರತಿಭೆ ಶ್ರೀ ಸಂಭ್ರಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ‌ ಸಿನಿಮಾವಾಗಿದೆ. ಈ ಸಿನಿಮಾ ಮೂಲಕ ಶ್ರೀ ಸಂಭ್ರಮ ನಿರ್ದೇಶಕರಾಗಿ ಚಿತ್ರರಂಗಕ್ಕೆ ಅಡಿಇಡ್ತಿದ್ದಾರೆ. ಯುವ ಪ್ರತಿಭೆಗಳಾದ ಅಭಯ್ ವೀರ್, ವೀರೆಂದ್ರ ಶೆಟ್ಟಿ,ರಿಧಿ ರಾಥೋರ್, ಕಿರಣ್ ಕುಮಾರ್, ಯಶವಂತ್, ರಾಘವೇಂದ್ರ , ಸ್ಪೂರ್ತಿ ಹಾಗೂ ಶ್ರಾವಣಿ ಚಿತ್ರದಲ್ಲಿ ನಟಿಸಿದ್ದಾರೆ.

ಸಂಭ್ರಮ ಒಂದು ರೋಮ್ಯಾಂಟಿಕ್ ಯೂತ್ ಫುಲ್ ಎಂಟರ್ ಟೈನರ್ ಸಿನಿಮಾವಾಗಿದೆ. ಈ ಚಿತ್ರಕ್ಕೆ ಮ್ಯೂಸಿಕಲ್ ಮಾಂತ್ರಿಕ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸೋನು ನಿಗಂ, ಮನೋಮೂರ್ತಿ ಮತ್ತು ಜಯಂತ್ ಕಾಯ್ಕಿಣಿಯವರ ಹಿಟ್ ಕಾಂಬಿನೇಷನ್ ಈ ಸಿನಿಮಾದಲ್ಲಿ ಮತ್ತೆ ಒಂದಾಗಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸಂಭ್ರಮ ಸಿನಿಮಾವನ್ನು ಹೊಸಪೇಟೆ, ಗಂಗಾವತಿ, ಸಿಂಧನೂರು ಸುತ್ತಮುತ್ತ 47 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಸೆಪ್ಟೆಂಬರ್ ಹೊತ್ತಿಗೆ ಸಿನಿಮಾ ತೆರೆಗೆ ತರೋದಿಕ್ಕೆ ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

Spread the love

ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ಅನಿಲ್ ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿಬಂದಿರುವ ಸಂಭ್ರಮ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಆಡೋಕೆ ಸಾವಿರ ಆಟ ಎಂಬ ಸಾಹಿತ್ಯವಿರುವ ಹಾಡು ನಿಮ್ಮ ಬಾಲ್ಯವನ್ನು ನೆನಪಿಸುತ್ತದೆ. ಬಾಲ್ಯದಲ್ಲಿ ಆಡಿದ ಆಟ, ತರಲೆಗಳು, ಶಾಲೆಯ ರಜಾ ಮಜಾ ಸವಿಯುವ ಕ್ಷಣವನ್ನು ಹಾಗೂ ಒಂದಷ್ಟು ಫಿಲಾಸಪಿ ಮತ್ತು ಹೆಚ್ಚು ನೆನಪುಗಳನು ನೆನಪಿಸುವ ಈ ಹಾಡಿಗೆ ನಿರ್ದೇಶಕ ಶ್ರೀ ಸಂಭ್ರಮ ಸಾಹಿತ್ಯ ಬರೆದಿದ್ದು, ಸೋನಲ್ ಶ್ರೀವತ್ಸವ್, ಅಭಿನವ್ ಭಟ್, ಅಪ್ರಮಿ, ಶ್ರೇಯ ಶ್ರೀರಂಗ, ಶಶಿಕಲಾ ಸುನಿಲ್, ಪೂರ್ಣಿಮಾ ಮಂಜುನಾಥ್, ದಿವ್ಯಾ ರಾಮಚಂದ್ರ ಧ್ವನಿಯಾಗಿದ್ದು, ಮನೋಮೂರ್ತಿ ಅದ್ಭುತ ಮ್ಯೂಸಿಕ್ ಹಾಡಿಗಿದೆ.

 

 

 

ರಂಗಭೂಮಿಯಲ್ಲಿ ಪಳಗಿರುವ ಪ್ರತಿಭೆ ಶ್ರೀ ಸಂಭ್ರಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ‌ ಸಿನಿಮಾವಾಗಿದೆ. ಈ ಸಿನಿಮಾ ಮೂಲಕ ಶ್ರೀ ಸಂಭ್ರಮ ನಿರ್ದೇಶಕರಾಗಿ ಚಿತ್ರರಂಗಕ್ಕೆ ಅಡಿಇಡ್ತಿದ್ದಾರೆ. ಯುವ ಪ್ರತಿಭೆಗಳಾದ ಅಭಯ್ ವೀರ್, ವೀರೆಂದ್ರ ಶೆಟ್ಟಿ,ರಿಧಿ ರಾಥೋರ್, ಕಿರಣ್ ಕುಮಾರ್, ಯಶವಂತ್, ರಾಘವೇಂದ್ರ , ಸ್ಪೂರ್ತಿ ಹಾಗೂ ಶ್ರಾವಣಿ ಚಿತ್ರದಲ್ಲಿ ನಟಿಸಿದ್ದಾರೆ.

ಸಂಭ್ರಮ ಒಂದು ರೋಮ್ಯಾಂಟಿಕ್ ಯೂತ್ ಫುಲ್ ಎಂಟರ್ ಟೈನರ್ ಸಿನಿಮಾವಾಗಿದೆ. ಈ ಚಿತ್ರಕ್ಕೆ ಮ್ಯೂಸಿಕಲ್ ಮಾಂತ್ರಿಕ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸೋನು ನಿಗಂ, ಮನೋಮೂರ್ತಿ ಮತ್ತು ಜಯಂತ್ ಕಾಯ್ಕಿಣಿಯವರ ಹಿಟ್ ಕಾಂಬಿನೇಷನ್ ಈ ಸಿನಿಮಾದಲ್ಲಿ ಮತ್ತೆ ಒಂದಾಗಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸಂಭ್ರಮ ಸಿನಿಮಾವನ್ನು ಹೊಸಪೇಟೆ, ಗಂಗಾವತಿ, ಸಿಂಧನೂರು ಸುತ್ತಮುತ್ತ 47 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಸೆಪ್ಟೆಂಬರ್ ಹೊತ್ತಿಗೆ ಸಿನಿಮಾ ತೆರೆಗೆ ತರೋದಿಕ್ಕೆ ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

Spread the love
Continue Reading
Click to comment

Leave a Reply

Your email address will not be published. Required fields are marked *