Connect with us

Cinema News

ವನ್ಯಜೀವಿ ಸಂರಕ್ಷಣೆಯತ್ತ ಹೊಸ ಹೆಜ್ಜೆ; ‘ಕ್ರಾಸಿಂಗ್ ಪಾತ್ಸ್’ ಸಾಕ್ಷ್ಯಚಿತ್ರ ಅನಾವರಣ

Published

on

‘ವಿಶ್ವ ಆನೆಗಳ ದಿನ’ದ ಅಂಗವಾಗಿ ಅನಾವರಣಗೊಳ್ಳುತ್ತಿರುವ ‘ಕ್ರಾಸಿಂಗ್ ಪಾತ್ಸ್’ ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ನಿರ್ದೇಶಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷದ ಗಂಭೀರತೆಯನ್ನು ತೆರೆದಿಡುವ ಈ ಸಾಕ್ಷ್ಯಚಿತ್ರವು, ಕಾಡು ಮತ್ತು ಮಾನವ ವಸತಿ ಪ್ರದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿರುವ ಪರಿಸರ ಬದಲಾವಣೆಗಳತ್ತ ಗಮನ ಸೆಳೆಯುತ್ತದೆ. ಟೆಕಿಯಾನ್ ಸಂಸ್ಥೆಯ ಸಿಎಸ್‌ಆರ್ ಉಪಕ್ರಮದ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆ, ಆ ರೋಚಾ ಇಂಡಿಯಾ ಹಾಗೂ ಸಂಪಿಗೆ ಫಿಲ್ಮ್ಸ್ ಪ್ರೊಡಕ್ಷನ್ ಸಹಯೋಗದಲ್ಲಿ ಸಾಕ್ಷ್ಯಚಿತ್ರ ಮೂಡಿಬಂದಿದೆ.

 

ಅರಣ್ಯ ಪ್ರದೇಶಗಳು ದಿನದಿಂದ ದಿನಕ್ಕೆ ಕುಗ್ಗುತ್ತಿರುವುದು ಹಾಗೂ ಮಾನವನ ಚಟುವಟಿಕೆಗಳಿಂದ ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗುತ್ತಿರುವುದು ಆನೆಗಳು ಮಾನವ ವಸತಿ ಪ್ರದೇಶಗಳತ್ತ ಬರುವ ಪ್ರಮುಖ ಕಾರಣವಾಗಿದೆ. ಇದರಿಂದ ಸ್ಥಳೀಯ ಜನರು ಮತ್ತು ಆನೆಗಳ ನಡುವೆ ಸಂಘರ್ಷ ಹೆಚ್ಚುತ್ತಿದೆ. ಈ ಸಮಸ್ಯೆಯ ವಿವಿಧ ಆಯಾಮಗಳನ್ನು ‘ಕ್ರಾಸಿಂಗ್ ಪಾತ್ಸ್’ ಅನ್ವೇಷಿಸಲಿದ್ದು, ಮಾನವ ಮತ್ತು ವನ್ಯಜೀವಿಗಳು ಪರಸ್ಪರ ಸಹಬಾಳ್ವೆ ನಡೆಸಲು ಅನುಸರಿಸಬೇಕಾದ ಸುಸ್ಥಿರ ಮಾರ್ಗಗಳ ಅಗತ್ಯವನ್ನು ಒತ್ತಿ ಹೇಳುತ್ತದೆ.

 

 

 

 

 

 

ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆ ರೋಚಾ ಇಂಡಿಯಾ ನಡೆಸುತ್ತಿರುವ ‘ಪ್ರಾಜೆಕ್ಟ್ ಇಎಡಿಡಿಎಸ್’ ಯೋಜನೆಯ ಕಾರ್ಯವೈಖರಿಯನ್ನೂ ಸಾಕ್ಷ್ಯಚಿತ್ರ ದಾಖಲಿಸುತ್ತದೆ. ಆನೆಗಳ ಉಪಟಳವನ್ನು ತಡೆಯಲು ಶ್ವಾನ ದಳದ ನೆರವಿನಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಈ ಯೋಜನೆ ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ. ಆ ರೋಚಾ ಇಂಡಿಯಾದ ರಾಷ್ಟ್ರೀಯ ನಿರ್ದೇಶಕ ಅವಿನಾಶ್ ಕೃಷ್ಣನ್ ಈ ಕಾರ್ಯಕ್ರಮದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ‘ಗಂಧದ ಗುಡಿ’ ಹಾಗೂ ‘777 ಚಾರ್ಲಿ’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಪ್ರತೀಕ್ ಶೆಟ್ಟಿ ‘ಕ್ರಾಸಿಂಗ್ ಪಾತ್ಸ್’ಗೂ ಕ್ಯಾಮೆರಾ ಹಿಡಿದಿದ್ದಾರೆ.

 

 

 

 

 

 

ಕರ್ನಾಟಕ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ, ಪಿಸಿವಿಎಫ್ ಪುಷ್ಕರ್ ಕುಮಾರ್, ಪ್ರಾಜೆಕ್ಟ್ ಎಲಿಫೆಂಟ್ ಮುಖ್ಯಸ್ಥ ಮನೋಜ್ ರಾಜನ್, ಹಾಸನದ ಡಿಸಿಎಫ್ ಸೌರಭ್ ಕುಮಾರ್ ಹಾಗೂ ಆ ರೋಚಾ ಇಂಡಿಯಾದ ಅವಿನಾಶ್ ಕೃಷ್ಣನ್ ಸೇರಿದಂತೆ ಹಲವು ಪ್ರಮುಖರು ಈ ಯೋಜನೆಯೊಂದಿಗೆ ಕೈಜೋಡಿಸಿದ್ದಾರೆ. ಹವಾಮಾನ ಬದಲಾವಣೆ ಮತ್ತು ಪರಿಸರ ನಾಶದ ಪರಿಣಾಮಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಮಾನವ-ಆನೆ ಸಂಘರ್ಷದಂತಹ ಸೂಕ್ಷ್ಮ ವಿಚಾರದತ್ತ ಗಮನ ಸೆಳೆಯುವ ಮೂಲಕ ಶಾಂತಿಯುತ ಸಹಬಾಳ್ವೆಯ ಸಾಧ್ಯತೆಗಳನ್ನು ‘ಕ್ರಾಸಿಂಗ್ ಪಾತ್ಸ್’ ಅನಾವರಣಗೊಳಿಸುವ ಉದ್ದೇಶ ಹೊಂದಿದೆ.

Spread the love

‘ವಿಶ್ವ ಆನೆಗಳ ದಿನ’ದ ಅಂಗವಾಗಿ ಅನಾವರಣಗೊಳ್ಳುತ್ತಿರುವ ‘ಕ್ರಾಸಿಂಗ್ ಪಾತ್ಸ್’ ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ನಿರ್ದೇಶಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷದ ಗಂಭೀರತೆಯನ್ನು ತೆರೆದಿಡುವ ಈ ಸಾಕ್ಷ್ಯಚಿತ್ರವು, ಕಾಡು ಮತ್ತು ಮಾನವ ವಸತಿ ಪ್ರದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿರುವ ಪರಿಸರ ಬದಲಾವಣೆಗಳತ್ತ ಗಮನ ಸೆಳೆಯುತ್ತದೆ. ಟೆಕಿಯಾನ್ ಸಂಸ್ಥೆಯ ಸಿಎಸ್‌ಆರ್ ಉಪಕ್ರಮದ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆ, ಆ ರೋಚಾ ಇಂಡಿಯಾ ಹಾಗೂ ಸಂಪಿಗೆ ಫಿಲ್ಮ್ಸ್ ಪ್ರೊಡಕ್ಷನ್ ಸಹಯೋಗದಲ್ಲಿ ಸಾಕ್ಷ್ಯಚಿತ್ರ ಮೂಡಿಬಂದಿದೆ.

 

ಅರಣ್ಯ ಪ್ರದೇಶಗಳು ದಿನದಿಂದ ದಿನಕ್ಕೆ ಕುಗ್ಗುತ್ತಿರುವುದು ಹಾಗೂ ಮಾನವನ ಚಟುವಟಿಕೆಗಳಿಂದ ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗುತ್ತಿರುವುದು ಆನೆಗಳು ಮಾನವ ವಸತಿ ಪ್ರದೇಶಗಳತ್ತ ಬರುವ ಪ್ರಮುಖ ಕಾರಣವಾಗಿದೆ. ಇದರಿಂದ ಸ್ಥಳೀಯ ಜನರು ಮತ್ತು ಆನೆಗಳ ನಡುವೆ ಸಂಘರ್ಷ ಹೆಚ್ಚುತ್ತಿದೆ. ಈ ಸಮಸ್ಯೆಯ ವಿವಿಧ ಆಯಾಮಗಳನ್ನು ‘ಕ್ರಾಸಿಂಗ್ ಪಾತ್ಸ್’ ಅನ್ವೇಷಿಸಲಿದ್ದು, ಮಾನವ ಮತ್ತು ವನ್ಯಜೀವಿಗಳು ಪರಸ್ಪರ ಸಹಬಾಳ್ವೆ ನಡೆಸಲು ಅನುಸರಿಸಬೇಕಾದ ಸುಸ್ಥಿರ ಮಾರ್ಗಗಳ ಅಗತ್ಯವನ್ನು ಒತ್ತಿ ಹೇಳುತ್ತದೆ.

 

 

 

 

 

 

ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆ ರೋಚಾ ಇಂಡಿಯಾ ನಡೆಸುತ್ತಿರುವ ‘ಪ್ರಾಜೆಕ್ಟ್ ಇಎಡಿಡಿಎಸ್’ ಯೋಜನೆಯ ಕಾರ್ಯವೈಖರಿಯನ್ನೂ ಸಾಕ್ಷ್ಯಚಿತ್ರ ದಾಖಲಿಸುತ್ತದೆ. ಆನೆಗಳ ಉಪಟಳವನ್ನು ತಡೆಯಲು ಶ್ವಾನ ದಳದ ನೆರವಿನಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಈ ಯೋಜನೆ ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ. ಆ ರೋಚಾ ಇಂಡಿಯಾದ ರಾಷ್ಟ್ರೀಯ ನಿರ್ದೇಶಕ ಅವಿನಾಶ್ ಕೃಷ್ಣನ್ ಈ ಕಾರ್ಯಕ್ರಮದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ‘ಗಂಧದ ಗುಡಿ’ ಹಾಗೂ ‘777 ಚಾರ್ಲಿ’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಪ್ರತೀಕ್ ಶೆಟ್ಟಿ ‘ಕ್ರಾಸಿಂಗ್ ಪಾತ್ಸ್’ಗೂ ಕ್ಯಾಮೆರಾ ಹಿಡಿದಿದ್ದಾರೆ.

 

 

 

 

 

 

ಕರ್ನಾಟಕ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ, ಪಿಸಿವಿಎಫ್ ಪುಷ್ಕರ್ ಕುಮಾರ್, ಪ್ರಾಜೆಕ್ಟ್ ಎಲಿಫೆಂಟ್ ಮುಖ್ಯಸ್ಥ ಮನೋಜ್ ರಾಜನ್, ಹಾಸನದ ಡಿಸಿಎಫ್ ಸೌರಭ್ ಕುಮಾರ್ ಹಾಗೂ ಆ ರೋಚಾ ಇಂಡಿಯಾದ ಅವಿನಾಶ್ ಕೃಷ್ಣನ್ ಸೇರಿದಂತೆ ಹಲವು ಪ್ರಮುಖರು ಈ ಯೋಜನೆಯೊಂದಿಗೆ ಕೈಜೋಡಿಸಿದ್ದಾರೆ. ಹವಾಮಾನ ಬದಲಾವಣೆ ಮತ್ತು ಪರಿಸರ ನಾಶದ ಪರಿಣಾಮಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಮಾನವ-ಆನೆ ಸಂಘರ್ಷದಂತಹ ಸೂಕ್ಷ್ಮ ವಿಚಾರದತ್ತ ಗಮನ ಸೆಳೆಯುವ ಮೂಲಕ ಶಾಂತಿಯುತ ಸಹಬಾಳ್ವೆಯ ಸಾಧ್ಯತೆಗಳನ್ನು ‘ಕ್ರಾಸಿಂಗ್ ಪಾತ್ಸ್’ ಅನಾವರಣಗೊಳಿಸುವ ಉದ್ದೇಶ ಹೊಂದಿದೆ.

Spread the love
Continue Reading