Connect with us

Cinema News

ಮುತ್ತತ್ತಿ ದೇವರಾಜ್ ಆಗಿ ಥ್ರಿಲ್ಲರ್ ಮಂಜು ! ಎಮೋಷನಲ್ ಪಾತ್ರದಲ್ಲಿ ಇಂಡಿಯನ್ ಜಾಕಿಚಾನ್

Published

on

ಇಂಡಿಯನ್ ಜಾಕಿಚಾನ್ ಎಂದೇ ಹೆಸರಾದ ಸಾಹಸ ನಿರ್ದೇಶಕ, ಡಾ ಥ್ರಿಲ್ಲರ್ ಮಂಜು ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಮುಗಿಲ ಮಲ್ಲಿಗೆ.
ಎ.ಎನ್.ಆರ್. ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ರೆಡ್ಡಿ ಅವರು ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಸಿನಿಮಾದಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್ ಹಾಗು ಸಹನಾ ಚಂದ್ರಶೇಖರ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಗಿಲ ಮಲ್ಲಿಗೆ ದ್ವೇಷ ಮತ್ತು ಪ್ರೀತಿಯ ಸುತ್ತ ನಡೆಯುವ ಲವ್ ಸ್ಟೋರಿ.


ಇಷ್ಟು ದಿನ ಆಕ್ಷನ್ ಹಾಗೂ ಪೋಲೀಸ್ ಪಾತ್ರಗಳಲ್ಲಿ ನಟಿಸಿದ್ದ ನಟ, ನಿರ್ದೇಶಕ, ಸಾಹಸ ನಿರ್ದೇಶಕ ಡಾ ಥ್ರಿಲ್ಲರ್ ಮಂಜು ಅವರು ಈ ಚಿತ್ರದಲ್ಲಿ ಮುತ್ತತ್ತಿ ದೇವರಾಜ್ ಎಂಬ ಎಮೋಷನಲ್ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಅವರ ಪತ್ನಿಯ ಪಾತ್ರದಲ್ಲಿ ಹಿರಿಯ ನಟಿ ಭವ್ಯಾ ಅವರು ನಟಿಸಿರುವುದು ವಿಶೇಷ.


ಈಗಾಗಲೇ ಕಂಬಳಿಪುರ ಕಾಟೇರಮ್ಮ, ಭಕ್ತರಹಳ್ಳಿ, ಪೂಜೇನ ಅಗ್ರಹಾರ, ಗಟ್ಟಿಗನಬ್ಬೆ ಹಾಗೂ ಹೊಸಕೋಟೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಚಿತ್ರದ ಮಾತಿನ ಭಾಗ ಮತ್ತು ಸಾಹಸ ಸನ್ನಿವೇಶಗಳ ಚಿತ್ರೀಕರಣವನ್ನು ಮುಗಿಸಿರುವ ಮುಗಿಲ ಮಲ್ಲಿಗೆ ಚಿತ್ರತಂಡ, ಹಾಡುಗಳು ಚಿತ್ರೀಕರಣಕ್ಕಾಗಿ ಸಕಲೇಶಪುರ, ಮಡಿಕೇರಿಗೆ ಹೊರಡಲಿದೆ. 


ಇನ್ನು ಈ ಚಿತ್ರಕ್ಕೆ ಅಭಿನಂದನ್ ಶೆಟ್ಟಿ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಅವರ ಸಂಗೀತ ಸಂಯೋಜನೆ, ರಾಜೀವ್ ಕೃಷ್ಣ ಅವರ ಸಾಹಿತ್ಯ. ವಿನಯ್ ಜಿ. ಆಲೂರು ಅವರ ಸಂಕಲನ. ಥ್ರಿಲ್ಲರ್ ಮಂಜು ಅವರ ಸಾಹಸ, ಮೋಹನ್ ಕುಮಾರ್ ಅವರ ಪ್ರಸಾದನ, ಮಲ್ಲಿಕಾರ್ಜುನ ಅವರ ಕಲಾ ನಿರ್ದೇಶನ, ಭದ್ರಾವತಿ ಪ್ರವೀಣ್ ಅವರ ಸಹ ನಿರ್ದೇಶನವಿದ್ದು,
ಈಗಾಗಲೇ ಟಾಲಿವುಡ್ ನಲ್ಲಿ ರುದ್ರಾಕ್ಷ ಪುರಂ, ಪ್ರೇಮಭಿಕ್ಷ ಚಿತ್ರಗಳನ್ನು ನಿರ್ದೇಸಿರುವ ಆರ್. ಕೆ. ಗಾಂಧಿ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.


ಮುಗಿಲ ಮಲ್ಲಿಗೆ ಚಿತ್ರದ ಪ್ರಮುಖ ತಾರಾಗಣದಲ್ಲಿ ಸನತ್ , ಸಹನಾ ಚಂದ್ರಶೇಖರ್, ಥ್ರಿಲ್ಲರ್ ಮಂಜು, ಭವ್ಯಾ, ರಾಜೇಶ್, ಶಂಕರ್, ಎಂ. ವಿ. ಸಮಯ್, ಕಿಶೋರ್ ಕುಂಬ್ಳೆ , ಶಿವು ಕಾಸರಗೋಡು, ಸಿದ್ದಯ್ಯ ಹಿರೇಮಠ, ರವಿ , ದೀನ, ಬೃಂದ, ನಾಗ, ಜಯರಾಂ, ಯುವೀನ, ಸತ್ಯವಾರ ನಾಗೇಶ್, ವಸಂತ ನಾಯಕ್, ಕಿರಣ್ ಗಟ್ಟಿಗನಬ್ಬೆ, ಮೋನಿಕಾ ಮೊದಲಾದವರು ನಟಿಸುತ್ತಿದ್ದಾರೆ.

Spread the love

ಇಂಡಿಯನ್ ಜಾಕಿಚಾನ್ ಎಂದೇ ಹೆಸರಾದ ಸಾಹಸ ನಿರ್ದೇಶಕ, ಡಾ ಥ್ರಿಲ್ಲರ್ ಮಂಜು ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಮುಗಿಲ ಮಲ್ಲಿಗೆ.
ಎ.ಎನ್.ಆರ್. ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ರೆಡ್ಡಿ ಅವರು ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಸಿನಿಮಾದಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್ ಹಾಗು ಸಹನಾ ಚಂದ್ರಶೇಖರ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಗಿಲ ಮಲ್ಲಿಗೆ ದ್ವೇಷ ಮತ್ತು ಪ್ರೀತಿಯ ಸುತ್ತ ನಡೆಯುವ ಲವ್ ಸ್ಟೋರಿ.


ಇಷ್ಟು ದಿನ ಆಕ್ಷನ್ ಹಾಗೂ ಪೋಲೀಸ್ ಪಾತ್ರಗಳಲ್ಲಿ ನಟಿಸಿದ್ದ ನಟ, ನಿರ್ದೇಶಕ, ಸಾಹಸ ನಿರ್ದೇಶಕ ಡಾ ಥ್ರಿಲ್ಲರ್ ಮಂಜು ಅವರು ಈ ಚಿತ್ರದಲ್ಲಿ ಮುತ್ತತ್ತಿ ದೇವರಾಜ್ ಎಂಬ ಎಮೋಷನಲ್ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಅವರ ಪತ್ನಿಯ ಪಾತ್ರದಲ್ಲಿ ಹಿರಿಯ ನಟಿ ಭವ್ಯಾ ಅವರು ನಟಿಸಿರುವುದು ವಿಶೇಷ.


ಈಗಾಗಲೇ ಕಂಬಳಿಪುರ ಕಾಟೇರಮ್ಮ, ಭಕ್ತರಹಳ್ಳಿ, ಪೂಜೇನ ಅಗ್ರಹಾರ, ಗಟ್ಟಿಗನಬ್ಬೆ ಹಾಗೂ ಹೊಸಕೋಟೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಚಿತ್ರದ ಮಾತಿನ ಭಾಗ ಮತ್ತು ಸಾಹಸ ಸನ್ನಿವೇಶಗಳ ಚಿತ್ರೀಕರಣವನ್ನು ಮುಗಿಸಿರುವ ಮುಗಿಲ ಮಲ್ಲಿಗೆ ಚಿತ್ರತಂಡ, ಹಾಡುಗಳು ಚಿತ್ರೀಕರಣಕ್ಕಾಗಿ ಸಕಲೇಶಪುರ, ಮಡಿಕೇರಿಗೆ ಹೊರಡಲಿದೆ. 


ಇನ್ನು ಈ ಚಿತ್ರಕ್ಕೆ ಅಭಿನಂದನ್ ಶೆಟ್ಟಿ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಅವರ ಸಂಗೀತ ಸಂಯೋಜನೆ, ರಾಜೀವ್ ಕೃಷ್ಣ ಅವರ ಸಾಹಿತ್ಯ. ವಿನಯ್ ಜಿ. ಆಲೂರು ಅವರ ಸಂಕಲನ. ಥ್ರಿಲ್ಲರ್ ಮಂಜು ಅವರ ಸಾಹಸ, ಮೋಹನ್ ಕುಮಾರ್ ಅವರ ಪ್ರಸಾದನ, ಮಲ್ಲಿಕಾರ್ಜುನ ಅವರ ಕಲಾ ನಿರ್ದೇಶನ, ಭದ್ರಾವತಿ ಪ್ರವೀಣ್ ಅವರ ಸಹ ನಿರ್ದೇಶನವಿದ್ದು,
ಈಗಾಗಲೇ ಟಾಲಿವುಡ್ ನಲ್ಲಿ ರುದ್ರಾಕ್ಷ ಪುರಂ, ಪ್ರೇಮಭಿಕ್ಷ ಚಿತ್ರಗಳನ್ನು ನಿರ್ದೇಸಿರುವ ಆರ್. ಕೆ. ಗಾಂಧಿ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.


ಮುಗಿಲ ಮಲ್ಲಿಗೆ ಚಿತ್ರದ ಪ್ರಮುಖ ತಾರಾಗಣದಲ್ಲಿ ಸನತ್ , ಸಹನಾ ಚಂದ್ರಶೇಖರ್, ಥ್ರಿಲ್ಲರ್ ಮಂಜು, ಭವ್ಯಾ, ರಾಜೇಶ್, ಶಂಕರ್, ಎಂ. ವಿ. ಸಮಯ್, ಕಿಶೋರ್ ಕುಂಬ್ಳೆ , ಶಿವು ಕಾಸರಗೋಡು, ಸಿದ್ದಯ್ಯ ಹಿರೇಮಠ, ರವಿ , ದೀನ, ಬೃಂದ, ನಾಗ, ಜಯರಾಂ, ಯುವೀನ, ಸತ್ಯವಾರ ನಾಗೇಶ್, ವಸಂತ ನಾಯಕ್, ಕಿರಣ್ ಗಟ್ಟಿಗನಬ್ಬೆ, ಮೋನಿಕಾ ಮೊದಲಾದವರು ನಟಿಸುತ್ತಿದ್ದಾರೆ.

Spread the love
Continue Reading
Click to comment

Leave a Reply

Your email address will not be published. Required fields are marked *