Movie Reviews

ಖಡಕ್‌ ಶಿವಣ್ಣನ ಖದರ್‌ ‘ರುಸ್ತುಂ’ – ವಿಮರ್ಶೆ – ರೇಟಿಂಗ್ – 3.5/5 – PopcornKannada

Published

on

ಚಿತ್ರ: ರುಸ್ತುಂ
ನಿರ್ದೇಶಕ: ರವಿವರ್ಮಾ.
ನಿರ್ಮಾಣ: ಜಯಣ್ಣ, ಬೋಗೇಂದ್ರ.
ಸಂಗೀತ: ಅನೂಪ್‌ ಸೀಳಿನ್‌.
ತಾರಾಗಣ: ಶಿವರಾಜ್‌ಕುಮಾರ್‌, ಶ್ರದ್ಧಾ ಶ್ರೀನಾಥ್‌, ಮಯೂರಿ, ವಿವೇಕ್‌ ಓಬೇರಾಯ್‌, ಮಹೇಂದ್ರನ್‌.

ರೇಟಿಂಗ್‌:3.5/5.

 

ಶಿವರಾಜ್‌ಕುಮಾರ್‌ ಈ ಹಿಂದೆ ಬಹಳಷ್ಟು ಪೊಲೀಸ್‌ ಕಥೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ರುಸ್ತುಂ ಅವೆಲ್ಲವಕ್ಕಿಂತಲೂ ಕೊಂಚ ಡಿಫ್ರೆಂಟ್‌ ಆಗಿದೆ.

 

ಅಭಿ[ ಶಿವರಾಜ್‌ಕುಮಾರ್‌] ಖಡಕ್‌ ಪೊಲೀಸ್‌ ಆಫೀಸರ್‌. ಕ್ರಿಮಿನಲ್ ಗಳನ್ನು ಕಂಡರೆ ಹಿಂದೆ ಮುಂದೆ ನೋಡದೆ ಎನ್‌ಕೌಂಟರ್‌ ಮಾಡುತವಂತಹ ವ್ಯಕ್ತಿತ್ವ. ಅಭಿ ಸ್ನೇಹಿತ ಭರತ್‌( ವಿವೇಕ್ ಒಬೆರಾಯ್) ಅದರ ತದ್ವಿರುದ್ಧ ಇಬ್ಬರೂ ಒಂದೇ ಡಿಪಾರ್ಟ್‌ ಮೆಂಟ್‌ನಲ್ಲಿ, ಬಿಹಾರದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಕರ್ನಾಟಕದ ಭ್ರಷ್ಟ ರಾಜಕಾರಣಿಗೂ ಬಿಹಾರಕ್ಕೂ ಸಂಬಂಧವಿರುವ ಒಂದು ಕೇಸ್‌ ಭರತ್‌ ಕೈಯಲ್ಲಿ ಸಿಗುತ್ತದೆ. ಈ ಕೇಸಿನ ವಿಚಾರಣೆಯನ್ನು ಭರತ್‌ ಕೈಗೆತ್ತಿಕೊಂಡಾಗ, ಸಿನಿಮಾ ಬೇರೆಯದ್ದೇ ತಿರುವು ಪಡೆದುಕೊಳ್ಳುತ್ತದೆ. ಇದೇ ಇಡೀ ಸಿನಿಮಾದ ಜೀವಾಳ ಅದೇನು ಎಂಬುದನ್ನು ಚಿತ್ರಮಂದಿರದಲ್ಲಿಯೇ ಹೋಗಿ ನೋಡಬೇಕು.

 

 

ಸಿನಿಮಾ ತಾಂತ್ರಿಕವಾಗಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಮೊದಲರ್ಧ ಸ್ವಲ್ಪ ಅಲ್ಲಲ್ಲಿ ಲ್ಯಾಗ್‌ ಅನ್ನಿಸಿದ್ರು, ಶಿವರಾಜ್‌ಕುಮಾರ್‌ ತಮ್ಮ ನಟನೆಯಲ್ಲಿ ಎಲ್ಲವನ್ನು ಸರಿದೂಗಿಸುತ್ತಾರೆ. ಅನೂಪ್‌ ಸೀಳಿನ್‌ ಬರೀ ಹಾಡುಗಳಿಂದ ಮಾತ್ರವಲ್ಲ ಬ್ಯಾಗ್ರೌಂಡ್‌ ಸ್ಕೋರ್‌ನಲ್ಲೂ ಸ್ಕೋರ್‌ ಮಾಡಿದ್ದಾರೆ.

 

ಈ ಚಿತ್ರದ ನಿರ್ದೇಶಕರು ಮೂಲತಃ ಸ್ಟಂಟ್‌ ಮಾಸ್ಟರ್‌ ಆದ್ದರಿಂದ ಭರ್ಜರಿ ಆ್ಯಕ್ಷನ್‌ ದೃಶ್ಯಗಳಿವೆ. ವಿವೇಕ್‌ ಓಬೇರಾಯ್‌ ಅವರದ್ದು ಸಮ ಚಿತ್ತದ ನಟನೆ. ಶ್ರದ್ಧಾ ಶ್ರೀನಾಥ್‌, ಮಯೂರಿ, ರಚಿತಾ ಎಲ್ಲರೂ ತಮ್ಮ ಪಾತ್ರಗಳಿಗ ನ್ಯಾಯ ಒದಗಿಸಿದ್ದಾರೆ.

 

ಇಡೀ ಸಿನಿಮಾವನ್ನು ಶಿವರಾಜ್‌ಕುಮಾರ್‌ ತಮ್ಮ ಹೆಗಲ ಮೇಲೆ ಹಾಕಿಕೊಂಡು ನಡೆದಿದ್ದಾರೆ. ಶಿವರಾಜ್‌ ಕೆ ಆರ್‌ ಪೇಟೆ ನಗಿಸುವಲ್ಲ ಯಶಸ್ವಿಯಾಗಿದ್ದಾರೆ. ಖಳರ ಪಾತ್ರದಲ್ಲಿ ಮಹೇಂದ್ರನ್‌, ಶಿವಮಣಿ , ಹರೀಶ್‌ ಉತ್ತಮನ್‌ ಗಮನ ಸೆಳೆಯುತ್ತಾರೆ. ಕೆಲವೇ ಕೆಲವು ನಿಮಿಷಗಳು ಮಾತ್ರ ಸ್ಕ್ರೀನ್‌ ಮೇಲಿದ್ದರೂ ಆರ್‌ ಜೆ ರೋಹಿತ್‌ ಸೂಜಿಗಲ್ಲಿನಂತೆ ಸೆಳೆಯುತ್ತಾರೆ.

 

ಕೊಂಚ ಮೈನೆಸ್‌ ಪಾಯಿಂಟ್ ಗಳಿದ್ದರೂ ಚಿತ್ರ ಶಿವಣ್ಣನ ಅಭಿಮಾನಿಗಳಿಗೆ ಹಬ್ಬದೂಟವೇ ಸರಿ.

 

Spread the love
Click to comment

Copyright © 2019 PopcornKannada.com