Connect with us

Cinema News

ಅತ್ಯಾಚಾರ ಮತ್ತು ವಂಚನೆ ವಿರುದ್ಧದ ಹೋರಾಟ ಹೇಳುವ ‘ಮೃತ್ಯುದೇವತೆ’ ಬಿಡುಗಡೆಗೆ ಸಜ್ಜು

Published

on

ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ವಂಚನೆಗಳ ವಿರುದ್ಧ ಧ್ವನಿ ಎತ್ತುವ ಕಥಾಹಂದರ ಹೊಂದಿರುವ ‘ಮೃತ್ಯುದೇವತೆ’ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನವೀನ್ ಮಹಾದೇವ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜಕ್ಕೆ ಒಂದು ಗಟ್ಟಿಯಾದ ಸಂದೇಶ ನೀಡುವ ಉದ್ದೇಶವನ್ನು ಹೊಂದಿದೆ. ದುಷ್ಟರ ಕುತಂತ್ರಕ್ಕೆ ಬಲಿಯಾದ ಮಹಿಳೆಯರು ಹೇಗೆ ಸಂಕಷ್ಟಗಳನ್ನು ಎದುರಿಸಿ, ಕೊನೆಗೆ ಅನ್ಯಾಯದ ವಿರುದ್ಧ ಹೋರಾಡುತ್ತಾರೆ ಎಂಬುದನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

 

ಮೂರು ಯುವತಿಯರ ಬದುಕಿನ ಸುತ್ತ ಸಾಗುವ ಈ ಮಹಿಳಾ ಪ್ರಧಾನ ಕಥೆಯಲ್ಲಿ, ವಂಚಕರ ಜಾಲಕ್ಕೆ ಸಿಲುಕಿದ ನಂತರ ಅವರು ಅನುಭವಿಸುವ ನೋವು, ಹೋರಾಟ ಮತ್ತು ನ್ಯಾಯಕ್ಕಾಗಿ ನಡೆಸುವ ಪ್ರಯತ್ನಗಳನ್ನು ತೆರೆದಿಡಲಾಗಿದೆ. ನಿರ್ದೇಶಕ ನವೀನ್ ಮಹಾದೇವ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದು, ಹಿರಿಯ ನಟಿ ವಿನಯ ಪ್ರಸಾದ್, ಸಾರಿಕಾ ರಾವ್, ಡಯಾನಾ, ಹಿಮಶ್ರೀ, ಮಾಹೀನ್, ಪವನ್ ಶೆಟ್ಟಿ ಹಾಗೂ ಸೂರ್ಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈಗಾಗಲೇ ಬಿಡುಗಡೆಯಾದ ಟ್ರೈಲರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.

 

 

 

 

 

 

“ಈ ಸಿನಿಮಾ ಕೇವಲ ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ಅಲ್ಲ, ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಹೆಣ್ಣುಮಕ್ಕಳೊಂದಿಗೆ ಪೋಷಕರೂ ಚಿತ್ರವನ್ನು ವೀಕ್ಷಿಸಬೇಕು. ಮಹಿಳೆಯ ಸಹನೆಯ ಮಿತಿ ದಾಟಿದಾಗ ಆಕೆ ಯಾವ ಮಟ್ಟಿಗೆ ಹೋರಾಡಬಲ್ಲಳು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ” ಎಂದು ನಿರ್ದೇಶಕ ನವೀನ್ ಮಹಾದೇವ್ ತಿಳಿಸಿದ್ದಾರೆ. ವರ್ಷಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸರಸ್ವತಿ ನಿರ್ಮಿಸಿರುವ ಈ ಚಿತ್ರಕ್ಕೆ ಅನಿರುಧ್ ಛಾಯಾಗ್ರಹಣ, ಶಿವಪ್ರಸಾದ್ ಸಂಗೀತ, ರಘು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಮತ್ತು ಚಿಟ್ಟ ಜಾಧವ್ ಸಾಹಸ ನಿರ್ದೇಶನ, ಮಂಜು ವಿಕ್ರಂ ಸಂಕಲನ ಹಾಗೂ ಗಣೇಶ್ ಕಲಾ ನಿರ್ದೇಶನ ನೀಡಿದ್ದಾರೆ.

Spread the love

ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ವಂಚನೆಗಳ ವಿರುದ್ಧ ಧ್ವನಿ ಎತ್ತುವ ಕಥಾಹಂದರ ಹೊಂದಿರುವ ‘ಮೃತ್ಯುದೇವತೆ’ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನವೀನ್ ಮಹಾದೇವ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜಕ್ಕೆ ಒಂದು ಗಟ್ಟಿಯಾದ ಸಂದೇಶ ನೀಡುವ ಉದ್ದೇಶವನ್ನು ಹೊಂದಿದೆ. ದುಷ್ಟರ ಕುತಂತ್ರಕ್ಕೆ ಬಲಿಯಾದ ಮಹಿಳೆಯರು ಹೇಗೆ ಸಂಕಷ್ಟಗಳನ್ನು ಎದುರಿಸಿ, ಕೊನೆಗೆ ಅನ್ಯಾಯದ ವಿರುದ್ಧ ಹೋರಾಡುತ್ತಾರೆ ಎಂಬುದನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

 

ಮೂರು ಯುವತಿಯರ ಬದುಕಿನ ಸುತ್ತ ಸಾಗುವ ಈ ಮಹಿಳಾ ಪ್ರಧಾನ ಕಥೆಯಲ್ಲಿ, ವಂಚಕರ ಜಾಲಕ್ಕೆ ಸಿಲುಕಿದ ನಂತರ ಅವರು ಅನುಭವಿಸುವ ನೋವು, ಹೋರಾಟ ಮತ್ತು ನ್ಯಾಯಕ್ಕಾಗಿ ನಡೆಸುವ ಪ್ರಯತ್ನಗಳನ್ನು ತೆರೆದಿಡಲಾಗಿದೆ. ನಿರ್ದೇಶಕ ನವೀನ್ ಮಹಾದೇವ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದು, ಹಿರಿಯ ನಟಿ ವಿನಯ ಪ್ರಸಾದ್, ಸಾರಿಕಾ ರಾವ್, ಡಯಾನಾ, ಹಿಮಶ್ರೀ, ಮಾಹೀನ್, ಪವನ್ ಶೆಟ್ಟಿ ಹಾಗೂ ಸೂರ್ಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈಗಾಗಲೇ ಬಿಡುಗಡೆಯಾದ ಟ್ರೈಲರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.

 

 

 

 

 

 

“ಈ ಸಿನಿಮಾ ಕೇವಲ ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ಅಲ್ಲ, ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಹೆಣ್ಣುಮಕ್ಕಳೊಂದಿಗೆ ಪೋಷಕರೂ ಚಿತ್ರವನ್ನು ವೀಕ್ಷಿಸಬೇಕು. ಮಹಿಳೆಯ ಸಹನೆಯ ಮಿತಿ ದಾಟಿದಾಗ ಆಕೆ ಯಾವ ಮಟ್ಟಿಗೆ ಹೋರಾಡಬಲ್ಲಳು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ” ಎಂದು ನಿರ್ದೇಶಕ ನವೀನ್ ಮಹಾದೇವ್ ತಿಳಿಸಿದ್ದಾರೆ. ವರ್ಷಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸರಸ್ವತಿ ನಿರ್ಮಿಸಿರುವ ಈ ಚಿತ್ರಕ್ಕೆ ಅನಿರುಧ್ ಛಾಯಾಗ್ರಹಣ, ಶಿವಪ್ರಸಾದ್ ಸಂಗೀತ, ರಘು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಮತ್ತು ಚಿಟ್ಟ ಜಾಧವ್ ಸಾಹಸ ನಿರ್ದೇಶನ, ಮಂಜು ವಿಕ್ರಂ ಸಂಕಲನ ಹಾಗೂ ಗಣೇಶ್ ಕಲಾ ನಿರ್ದೇಶನ ನೀಡಿದ್ದಾರೆ.

Spread the love
Continue Reading