News
ಗಣ್ಯರ ಸಾನ್ನಿಧ್ಯದಲ್ಲಿ ಖೇಲೋ ಬಿಎಸ್ಎನ್ಡಿಪಿ ಲೀಗ್ಗೆ ಅಧಿಕೃತ ಚಾಲನೆ

ಗ್ರಾಮೀಣ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ “ಖೇಲೋ ಬಿಎಸ್ಎನ್ಡಿಪಿ ಕ್ರಿಕೆಟ್ ಲೀಗ್” ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕೇರಳದ ಮಹಾನ್ ತತ್ವಜ್ಞಾನಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಹೆಸರಿನಲ್ಲಿ ಈ ಲೀಗ್ ಕರ್ನಾಟಕದಲ್ಲಿ ಆಯೋಜನೆಯಾಗುತ್ತಿದೆ.
🎯 ಮಹನೀಯರ ಸಾನ್ನಿಧ್ಯದಲ್ಲಿ ಚಾಲನೆ
ಪರಮಪೂಜ್ಯ ಶ್ರೀ ದೇವಿಕಾನಂದ ಸ್ವಾಮೀಜಿಗಳು ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಲೀಗ್ನ ಲೋಗೋ ಅನಾವರಣ ಮಾಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಸಾಕ್ಷಿಯಾದರು.

🌍 ರಾಜ್ಯವ್ಯಾಪಿ ಕ್ರೀಡಾ ಹಬ್ಬ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದು ತಂಡ ಭಾಗವಹಿಸಲಿದ್ದು, 31 ಜಿಲ್ಲೆಗಳಾದ್ಯಂತ ಸ್ಥಳೀಯ ಮಹನೀಯರ ಹೆಸರಿನಲ್ಲಿ “ಕ್ರೀಡಾ ಜ್ಯೋತಿ ಯಾತ್ರೆ” ಕೂಡ ನಡೆಯಲಿದೆ. ಇದು ಯುವಕರಲ್ಲಿ ಕ್ರೀಡಾ ಚೈತನ್ಯ ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ.

🏆 ಬಹುಮಾನಗಳ ಮಳೆ & ಗಣ್ಯರ ಹಾಜರಿ
ಲೀಗ್ನಲ್ಲಿ ವಿಜೇತರಾದವರಿಗೆ ₹25 ಲಕ್ಷ ಪ್ರಥಮ ಬಹುಮಾನ, ₹5 ಲಕ್ಷ ದ್ವಿತೀಯ ಹಾಗೂ ₹2.5 ಲಕ್ಷ ತೃತೀಯ ಬಹುಮಾನ ಘೋಷಿಸಲಾಗಿದೆ. ಮ್ಯಾನ್ ಆಫ್ ದ ಸೀರೀಸ್ಗೆ ಇವಿ ಬೈಕ್ ಬಹುಮಾನ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಕ್ರಿಕೆಟಿಗ ದೊಡ್ಡ ಗಣೇಶ್, ನಿರ್ಮಾಪಕ ಡಾ. ಸಂಜಯ್ ಗೌಡ ಸೇರಿದಂತೆ ಮೋಹನ್ ಬಾಬು, ಟಿವಿ ಬಾಬು, ಬಿ. ಸೋಮಶೇಖರ್, ಸೈದಪ್ಪ ಕೆ. ಗುತ್ತೇದಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು
