Connect with us

Television News

ಯಶಸ್ವಿಯಾಗಿ 500 ಸಂಚಿಕೆಗಳನ್ನ ಪೂರೈಸಿರುವ ʼʼಜನನಿʼʼ

Published

on

ಮನರಂಜನೆಯ ಮಹಾರಾಜ ಎಂದೇ ಮನೆಮಾತಾಗಿರುವ ಉದಯ ಟಿವಿಯು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ವೀಕ್ಷಕರನ್ನ ರಂಜಿಸುತ್ತಾ ಬಂದಿದೆ. ಕೌಟುಂಬಿಕ ಮನರಂಜನೆಯ ತಾಣವಾಗಿರುವ ಉದಯ ಟಿವಿಯಲ್ಲಿ ನೂರಾರು ಧಾರಾವಾಹಿಗಳು ಮನೆ-ಮನಗಳಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿವೆ. ಪ್ರಬಲ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಹಲವಾರು ವಿಭಿನ್ನ ಕಾರ್ಯಕ್ರಮಗಳು ಇಂದಿಗೂ ಪ್ರೇಕ್ಷಕರನ್ನ ರಂಜಿಸುತ್ತಲೇ ಇವೆ. ಅಂತಹ ಪ್ರಭಾವಿ ಕಾರ್ಯಕ್ರಮಗಳಲ್ಲಿ ಒಂದಾದ ʼʼಜನನಿʼʼ ಧಾರಾವಾಹಿಯು ಸದ್ಯ ಐನೂರರ ಗಡಿ ದಾಟಿ ಹೊಸ ಮೈಲುಗಲ್ಲನ್ನ ಸೃಷ್ಟಿಸಿದೆ. ತನ್ನ ಅಪ್ಪನ ಆಸೆಯಂತೆ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿ ಸ್ವಾವಲಂಬಿ ಜೀವನವನ್ನ ಕಟ್ಟಿಕೊಂಡು ಸ್ವಾಭಿಮಾನದಿಂದ ಬದುಕಬೇಕು ಅಂತ ಕನಸು ಕಾಣುವ ಹೆಣ್ಣುಮಗಳ ಕಥೆ ʼʼಜನನಿ!ʼʼ ಆದರೆ ವಿಧಿಯಾಟದ ಕೈಗೊಂಬೆಯಾಗಿ ತನ್ನ ಕನಸುಗಳಿಗೆ ಬರುವ ಅಡೆ-ತಡೆಗಳನ್ನ, ಪುರುಷ ಪ್ರಾಧಾನ್ಯ ವ್ಯವಸ್ಥೆಯ ದೌರ್ಜನ್ಯವನ್ನ ಎದುರಿಸಿ ಕಥಾನಾಯಕಿ ಹೇಗೆ ಸಾಧನೆಯ ದಡವನ್ನ ಸೇರುತ್ತಾಳೆ ಎನ್ನುವುದೇ ʼʼಜನನಿʼʼ ಧಾರಾವಾಹಿಯ ಸಾರಾಂಶ!

ಅಪ್ಪನ ಬೆಂಬಲದೊಂದಿಗೆ ಶಿಕ್ಷಣವನ್ನ ಯಶಸ್ವಿಯಾಗಿ ಪೂರೈಸುವ ಜನನಿ ಅನೀರಿಕ್ಷಿತವಾಗಿ ಮೂರು ಗಂಟುಗಳಿಗೆ ಕೊರಳೊಡ್ಡುವ ಪರಿಸ್ಥಿತಿ ಎದುರಾಗುತ್ತದೆ. ಮದುವೆಯಾಗಿ ಗಂಡನ ಮನೆಗೆ ಬರುವ ಜನನಿಯ ಜೀವನ ಪ್ರಯಾಣ ಮುಳ್ಳಿನ ಹಾದಿಯಲ್ಲೇ ಆರಂಭಗೊಳ್ಳುತ್ತದೆ. ನಾಲ್ಕು ಜನ ಸಹೋದರರ ಕುಟುಂಬಕ್ಕೆ ಸೊಸೆಯಾಗುವ ಜನನಿಗೆ ತನ್ನ ಗಂಡ ಪೃಥ್ವಿಯ ಹಿರಿಯಣ್ಣ ಧರ್ಮರಾಜನ ಕಪಿಮುಷ್ಠಿಯಲ್ಲಿ ಎಲ್ಲರೂ ಸಿಲುಕಿದ್ದಾರೆ ಎಂಬ ಸತ್ಯ ಆರಂಭದಲ್ಲೇ ಅರ್ಥವಾಗುತ್ತದೆ. ಗಂಡನ ಮನೆಯಲ್ಲಿ ಎದುರಾಗುವ ಪುರುಷ ಪ್ರಾಧಾನ್ಯತೆಯ ದರ್ಪವನ್ನ ಎದುರಿಸಲು ಪಣ ತೊಡುವ ಜನನಿಗೆ ತನ್ನಂತೆಯೇ ಸುಶಿಕ್ಷಿತ ಸೊಸೆಯಂದಿರು ಜೊತೆಯಾಗಿತ್ತಾರೆ. ಹೆಣ್ಣುಮಕ್ಕಳನ್ನ ಮನೆಗೆಲಸದವರಿಗಿಂತ ಕೀಳಾಗಿ ಕಾಣುವ ಗಂಡಸರ ಮನಸ್ಥಿತಿಗೆ ಸವಾಲೊಡ್ಡುವ ಜನನಿ ಕುಟುಂಬದಲ್ಲಿ ಧರ್ಮರಾಜನ ದೌರ್ಜನ್ಯದ ವಿರುದ್ಧ ದನಿಯೆತ್ತುತ್ತಾಳೆ.

ಕಾಲಾಂತರದಲ್ಲಿ ತನ್ನ ತಪ್ಪುಗಳನ್ನು ಅರ್ಥ ಮಾಡಿಕೊಂಡು ಬದಲಾಗುವ ಪೃಥ್ವಿ ಜನನಿಯ ಹೋರಾಟಕ್ಕೆ ಜೊತೆಯಾಗುತ್ತಾನೆ. ಜನನಿಯ ಪ್ರಭಾವದಿಂದ ಉಳಿದ ಸೊಸೆಯಂದಿರೂ ಮನೆಯ ಗಂಡಸರ ದಬ್ಬಾಳಿಕೆಯ ವಿರುದ್ಧ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತುತ್ತಾರೆ. ನಿತ್ಯ ಹಲವಾರು ಸಮಸ್ಯೆಗಳನ್ನ ಎದುರಿಸಿ ನಿಲ್ಲುವ ಜನನಿಗೆ ಸದ್ಯ ತನ್ನ ಅಜ್ಜಿಯ ಆಸ್ತಿಯನ್ನ ರಕ್ಷಣೆ ಮಾಡುವ ಜವಾಬ್ದಾರಿ ಹೆಗಲೇರಿದೆ. ಅಜ್ಜಿಯ ಆಸ್ತಿಯ ೪೦ ಪ್ರತಿಶತ ಭಾಗವನ್ನ ತನ್ನದನ್ನಾಗಿ ಮಾಡಿಕೊಳ್ಳಲು ಹೊಂಚು ಹಾಕ್ತಿರೋ ಧರ್ಮರಾಜನ ಪ್ರತಿಯೊಂದು ಕುತಂತ್ರವನ್ನ ಜನನಿ ಎದುರಿಸುತ್ತಲೇ ಬಂದಿದ್ದಾಳೆ. ಅಜ್ಜಿಯ ಆಸ್ತಿಗಾಗಿ ನಡೆದಿರೋ ಕುತಂತ್ರಗಳ ಸ್ಫರ್ಧೆಯಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರೋ ಜೀವಾನಂದನ ಹುಡುಕಾಟದಲ್ಲಿರುವ ಜನನಿಗೆ ಸದ್ಯ ನಡೆದಲ್ಲೆಲ್ಲಾ ಮುಳ್ಳಿನ ಹಾದಿ! ಯಶಸ್ವಿಯಾಗಿ 500 ಸಂಚಿಕೆಗಳನ್ನ ಪೂರೈಸಿರುವ ʼʼಜನನಿʼʼ ಧಾರಾವಾಹಿಯು ಮಹಿಳಾಮುಖಿ ಕಥಾಹಂದರದೊಂದಿಗೆ ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶವನ್ನ ನೀಡುತ್ತಾ ಕನ್ನಡಿಗರ ಮನೆಮಾತಾಗಿದೆ. ಇನ್ನು 500 ಸಂಚಿಕೆಗಳ ಸಂತಸದಲ್ಲಿರುವ “ಜನನಿ” ತಂಡ 500ರ ಯಶಸ್ಸನ್ನ ಕೇಕ್‌ ಕತ್ತರಿಸುವುದರ ಮುಖಾಂತರ ಸಂಭ್ರಮಿಸಿತು. ಧಾರಾವಾಹಿಯ ಯಶಸ್ಸಿಗೆ ಕಾರಣರಾದ ಉದಯ ವಾಹಿನಿಯ ವೀಕ್ಷಕರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿತು.  ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ವರ್ಷಿಕಾ ನಾಯಕ್‌, ಮುನಿರಾಜು, ಭವೀಶ್ ಗೌಡ,‌ ಅರುಣ್‌ ಹೆಗಡೆ, ಪುಷ್ಪಾ ಸ್ವಾಮಿ, ಶ್ವೇತಾ, ವರ್ಷಿತಾ ಮುಂತಾದ ಕಲಾವಿದರ ತಾರಾಬಳಗವೇ ಇದೆ.

ಹೊನ್ನೇಶ್‌ ರಾಮಚಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜನನಿ ಧಾರಾವಾಹಿಯು ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರಗೊಳ್ಳುತ್ತದೆ.

 

Spread the love

ಮನರಂಜನೆಯ ಮಹಾರಾಜ ಎಂದೇ ಮನೆಮಾತಾಗಿರುವ ಉದಯ ಟಿವಿಯು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ವೀಕ್ಷಕರನ್ನ ರಂಜಿಸುತ್ತಾ ಬಂದಿದೆ. ಕೌಟುಂಬಿಕ ಮನರಂಜನೆಯ ತಾಣವಾಗಿರುವ ಉದಯ ಟಿವಿಯಲ್ಲಿ ನೂರಾರು ಧಾರಾವಾಹಿಗಳು ಮನೆ-ಮನಗಳಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿವೆ. ಪ್ರಬಲ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಹಲವಾರು ವಿಭಿನ್ನ ಕಾರ್ಯಕ್ರಮಗಳು ಇಂದಿಗೂ ಪ್ರೇಕ್ಷಕರನ್ನ ರಂಜಿಸುತ್ತಲೇ ಇವೆ. ಅಂತಹ ಪ್ರಭಾವಿ ಕಾರ್ಯಕ್ರಮಗಳಲ್ಲಿ ಒಂದಾದ ʼʼಜನನಿʼʼ ಧಾರಾವಾಹಿಯು ಸದ್ಯ ಐನೂರರ ಗಡಿ ದಾಟಿ ಹೊಸ ಮೈಲುಗಲ್ಲನ್ನ ಸೃಷ್ಟಿಸಿದೆ. ತನ್ನ ಅಪ್ಪನ ಆಸೆಯಂತೆ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿ ಸ್ವಾವಲಂಬಿ ಜೀವನವನ್ನ ಕಟ್ಟಿಕೊಂಡು ಸ್ವಾಭಿಮಾನದಿಂದ ಬದುಕಬೇಕು ಅಂತ ಕನಸು ಕಾಣುವ ಹೆಣ್ಣುಮಗಳ ಕಥೆ ʼʼಜನನಿ!ʼʼ ಆದರೆ ವಿಧಿಯಾಟದ ಕೈಗೊಂಬೆಯಾಗಿ ತನ್ನ ಕನಸುಗಳಿಗೆ ಬರುವ ಅಡೆ-ತಡೆಗಳನ್ನ, ಪುರುಷ ಪ್ರಾಧಾನ್ಯ ವ್ಯವಸ್ಥೆಯ ದೌರ್ಜನ್ಯವನ್ನ ಎದುರಿಸಿ ಕಥಾನಾಯಕಿ ಹೇಗೆ ಸಾಧನೆಯ ದಡವನ್ನ ಸೇರುತ್ತಾಳೆ ಎನ್ನುವುದೇ ʼʼಜನನಿʼʼ ಧಾರಾವಾಹಿಯ ಸಾರಾಂಶ!

ಅಪ್ಪನ ಬೆಂಬಲದೊಂದಿಗೆ ಶಿಕ್ಷಣವನ್ನ ಯಶಸ್ವಿಯಾಗಿ ಪೂರೈಸುವ ಜನನಿ ಅನೀರಿಕ್ಷಿತವಾಗಿ ಮೂರು ಗಂಟುಗಳಿಗೆ ಕೊರಳೊಡ್ಡುವ ಪರಿಸ್ಥಿತಿ ಎದುರಾಗುತ್ತದೆ. ಮದುವೆಯಾಗಿ ಗಂಡನ ಮನೆಗೆ ಬರುವ ಜನನಿಯ ಜೀವನ ಪ್ರಯಾಣ ಮುಳ್ಳಿನ ಹಾದಿಯಲ್ಲೇ ಆರಂಭಗೊಳ್ಳುತ್ತದೆ. ನಾಲ್ಕು ಜನ ಸಹೋದರರ ಕುಟುಂಬಕ್ಕೆ ಸೊಸೆಯಾಗುವ ಜನನಿಗೆ ತನ್ನ ಗಂಡ ಪೃಥ್ವಿಯ ಹಿರಿಯಣ್ಣ ಧರ್ಮರಾಜನ ಕಪಿಮುಷ್ಠಿಯಲ್ಲಿ ಎಲ್ಲರೂ ಸಿಲುಕಿದ್ದಾರೆ ಎಂಬ ಸತ್ಯ ಆರಂಭದಲ್ಲೇ ಅರ್ಥವಾಗುತ್ತದೆ. ಗಂಡನ ಮನೆಯಲ್ಲಿ ಎದುರಾಗುವ ಪುರುಷ ಪ್ರಾಧಾನ್ಯತೆಯ ದರ್ಪವನ್ನ ಎದುರಿಸಲು ಪಣ ತೊಡುವ ಜನನಿಗೆ ತನ್ನಂತೆಯೇ ಸುಶಿಕ್ಷಿತ ಸೊಸೆಯಂದಿರು ಜೊತೆಯಾಗಿತ್ತಾರೆ. ಹೆಣ್ಣುಮಕ್ಕಳನ್ನ ಮನೆಗೆಲಸದವರಿಗಿಂತ ಕೀಳಾಗಿ ಕಾಣುವ ಗಂಡಸರ ಮನಸ್ಥಿತಿಗೆ ಸವಾಲೊಡ್ಡುವ ಜನನಿ ಕುಟುಂಬದಲ್ಲಿ ಧರ್ಮರಾಜನ ದೌರ್ಜನ್ಯದ ವಿರುದ್ಧ ದನಿಯೆತ್ತುತ್ತಾಳೆ.

ಕಾಲಾಂತರದಲ್ಲಿ ತನ್ನ ತಪ್ಪುಗಳನ್ನು ಅರ್ಥ ಮಾಡಿಕೊಂಡು ಬದಲಾಗುವ ಪೃಥ್ವಿ ಜನನಿಯ ಹೋರಾಟಕ್ಕೆ ಜೊತೆಯಾಗುತ್ತಾನೆ. ಜನನಿಯ ಪ್ರಭಾವದಿಂದ ಉಳಿದ ಸೊಸೆಯಂದಿರೂ ಮನೆಯ ಗಂಡಸರ ದಬ್ಬಾಳಿಕೆಯ ವಿರುದ್ಧ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತುತ್ತಾರೆ. ನಿತ್ಯ ಹಲವಾರು ಸಮಸ್ಯೆಗಳನ್ನ ಎದುರಿಸಿ ನಿಲ್ಲುವ ಜನನಿಗೆ ಸದ್ಯ ತನ್ನ ಅಜ್ಜಿಯ ಆಸ್ತಿಯನ್ನ ರಕ್ಷಣೆ ಮಾಡುವ ಜವಾಬ್ದಾರಿ ಹೆಗಲೇರಿದೆ. ಅಜ್ಜಿಯ ಆಸ್ತಿಯ ೪೦ ಪ್ರತಿಶತ ಭಾಗವನ್ನ ತನ್ನದನ್ನಾಗಿ ಮಾಡಿಕೊಳ್ಳಲು ಹೊಂಚು ಹಾಕ್ತಿರೋ ಧರ್ಮರಾಜನ ಪ್ರತಿಯೊಂದು ಕುತಂತ್ರವನ್ನ ಜನನಿ ಎದುರಿಸುತ್ತಲೇ ಬಂದಿದ್ದಾಳೆ. ಅಜ್ಜಿಯ ಆಸ್ತಿಗಾಗಿ ನಡೆದಿರೋ ಕುತಂತ್ರಗಳ ಸ್ಫರ್ಧೆಯಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರೋ ಜೀವಾನಂದನ ಹುಡುಕಾಟದಲ್ಲಿರುವ ಜನನಿಗೆ ಸದ್ಯ ನಡೆದಲ್ಲೆಲ್ಲಾ ಮುಳ್ಳಿನ ಹಾದಿ! ಯಶಸ್ವಿಯಾಗಿ 500 ಸಂಚಿಕೆಗಳನ್ನ ಪೂರೈಸಿರುವ ʼʼಜನನಿʼʼ ಧಾರಾವಾಹಿಯು ಮಹಿಳಾಮುಖಿ ಕಥಾಹಂದರದೊಂದಿಗೆ ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶವನ್ನ ನೀಡುತ್ತಾ ಕನ್ನಡಿಗರ ಮನೆಮಾತಾಗಿದೆ. ಇನ್ನು 500 ಸಂಚಿಕೆಗಳ ಸಂತಸದಲ್ಲಿರುವ “ಜನನಿ” ತಂಡ 500ರ ಯಶಸ್ಸನ್ನ ಕೇಕ್‌ ಕತ್ತರಿಸುವುದರ ಮುಖಾಂತರ ಸಂಭ್ರಮಿಸಿತು. ಧಾರಾವಾಹಿಯ ಯಶಸ್ಸಿಗೆ ಕಾರಣರಾದ ಉದಯ ವಾಹಿನಿಯ ವೀಕ್ಷಕರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿತು.  ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ವರ್ಷಿಕಾ ನಾಯಕ್‌, ಮುನಿರಾಜು, ಭವೀಶ್ ಗೌಡ,‌ ಅರುಣ್‌ ಹೆಗಡೆ, ಪುಷ್ಪಾ ಸ್ವಾಮಿ, ಶ್ವೇತಾ, ವರ್ಷಿತಾ ಮುಂತಾದ ಕಲಾವಿದರ ತಾರಾಬಳಗವೇ ಇದೆ.

ಹೊನ್ನೇಶ್‌ ರಾಮಚಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜನನಿ ಧಾರಾವಾಹಿಯು ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರಗೊಳ್ಳುತ್ತದೆ.

 

Spread the love
Continue Reading
Click to comment

Leave a Reply

Your email address will not be published. Required fields are marked *