Connect with us

Cinema News

ಇಂದಿನಿಂದ ರಾಜ್ಯಾದ್ಯಂತ “ರುಸ್ತುಂ” ಹವಾ!

Published

on

ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ – ಬೋಗೇಂದ್ರ ಅವರು ನಿರ್ಮಿಸಿರುವ, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯದ `ರುಸ್ತುಂ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 

ಚಿತ್ರ ಮೇಕಿಂಗ್ ಅದ್ಧೂರಿಯಾಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಹಾಡುಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಟಗರು ನಂತರ ಮತ್ತೊಮ್ಮೆ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಶಿವಣ್ಣನಿಗೆ ಜೋಡಿಯಾಗಿ ಲಕ್ಕಿ ಹೆರೊವಿನ್ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದಾರೆ.

 

ಖ್ಯಾತ ಸಾಹಸ ನಿರ್ದೇಶಕ ಡಾ||ರವಿವರ್ಮ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಸಾಹಸ ನಿರ್ದೇಶನವನ್ನು ರವಿವರ್ಮ ಅವರೆ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ನಾಗು ಆರ್.ಕೆ ಸಂಕಲನ ಹಾಗೂ ರಾಜು ಸುಂದರಂ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದಾರೆ. ರಘುಸಮರ್ಥ್ ಸಂಭಾಷಣೆ ಬರೆದಿದ್ದಾರೆ.

 

 

ಡಾ||ಶಿವರಾಜಕುಮಾರ್, ವಿವೇಕ್ ಒಬೆರಾಯ್, ಶ್ರದ್ಧಾ ಶ್ರೀನಾಥ್, ಮಯೂರಿ, ರಚಿತಾರಾಂ, ಹರೀಶ್ ಉತ್ತಮನ್, ಮಹೇಂದ್ರನ್, ಶತ್ರು, ಸಿದ್ಲಿಂಗು ಶ್ರೀಧರ್, ಧನರಾಜ್, ಪದ್ಮಾಜಾರಾವ್, ಮಂಜುನಾಥ್ ಹೆಗಡೆ, ಗಣೇಶ್ ಯಾದವ್, ನೈಲಾ(ಬಾಲನಟಿ), ಅರ್ಜುನ್ ಗೌಡ, ಶಿವರಾಜ ಕೆ.ಆರ್.ಪೇಟೆ, ಮಜಾಟಾಕೀಸ್ ಪವನ್, ರಾಜಹುಲಿ ಗಿರಿ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.

Spread the love

ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ – ಬೋಗೇಂದ್ರ ಅವರು ನಿರ್ಮಿಸಿರುವ, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯದ `ರುಸ್ತುಂ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 

ಚಿತ್ರ ಮೇಕಿಂಗ್ ಅದ್ಧೂರಿಯಾಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಹಾಡುಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಟಗರು ನಂತರ ಮತ್ತೊಮ್ಮೆ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಶಿವಣ್ಣನಿಗೆ ಜೋಡಿಯಾಗಿ ಲಕ್ಕಿ ಹೆರೊವಿನ್ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದಾರೆ.

 

ಖ್ಯಾತ ಸಾಹಸ ನಿರ್ದೇಶಕ ಡಾ||ರವಿವರ್ಮ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಸಾಹಸ ನಿರ್ದೇಶನವನ್ನು ರವಿವರ್ಮ ಅವರೆ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ನಾಗು ಆರ್.ಕೆ ಸಂಕಲನ ಹಾಗೂ ರಾಜು ಸುಂದರಂ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದಾರೆ. ರಘುಸಮರ್ಥ್ ಸಂಭಾಷಣೆ ಬರೆದಿದ್ದಾರೆ.

 

 

ಡಾ||ಶಿವರಾಜಕುಮಾರ್, ವಿವೇಕ್ ಒಬೆರಾಯ್, ಶ್ರದ್ಧಾ ಶ್ರೀನಾಥ್, ಮಯೂರಿ, ರಚಿತಾರಾಂ, ಹರೀಶ್ ಉತ್ತಮನ್, ಮಹೇಂದ್ರನ್, ಶತ್ರು, ಸಿದ್ಲಿಂಗು ಶ್ರೀಧರ್, ಧನರಾಜ್, ಪದ್ಮಾಜಾರಾವ್, ಮಂಜುನಾಥ್ ಹೆಗಡೆ, ಗಣೇಶ್ ಯಾದವ್, ನೈಲಾ(ಬಾಲನಟಿ), ಅರ್ಜುನ್ ಗೌಡ, ಶಿವರಾಜ ಕೆ.ಆರ್.ಪೇಟೆ, ಮಜಾಟಾಕೀಸ್ ಪವನ್, ರಾಜಹುಲಿ ಗಿರಿ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.

Spread the love
Continue Reading
Click to comment

Leave a Reply

Your email address will not be published. Required fields are marked *