Cinema News

ಗೃಹ ಸಚಿವರಾದ ಸನ್ಮಾನ್ಯ ಶ್ರೀ ಆರಗ ಜ್ಞಾನೇಂದ್ರ ರವರು ಇಂದು, ಕನ್ನಡ ಬೆಳ್ಳಿತೆರೆ ಮೇಲೆ ತಂದಿರುವ “ಶ್ರೀ ಅಲ್ಲಮ ಪ್ರಭು” ಚಲನಚಿತ್ರವನ್ನು PVR ವೈಷ್ಣವಿ ಮಾಲ್ ನಲ್ಲಿ ವೀಕ್ಷಿಸಿದರು

Published

on

ಗೃಹ ಸಚಿವರಾದ ಸನ್ಮಾನ್ಯ ಶ್ರೀ ಆರಗ ಜ್ಞಾನೇಂದ್ರ ರವರು ಇಂದು, 12ನೇ ಶತಮಾನದ ಇತಿಹಾಸವುಳ್ಳ ಶ್ರೀ ಅಲ್ಲಮ ಪ್ರಭು ರವರ ಜೀವನಾಧಾರಿತ ಕಥಾನಕವನ್ನು, ಕನ್ನಡ ಬೆಳ್ಳಿತೆರೆ ಮೇಲೆ ತಂದಿರುವ “ಶ್ರೀ ಅಲ್ಲಮ ಪ್ರಭು” ಚಲನಚಿತ್ರವನ್ನು PVR ವೈಷ್ಣವಿ ಮಾಲ್ ನಲ್ಲಿ ವೀಕ್ಷಿಸಿದರು.

ನಾಡಿನ ಪೂಜ್ಯ ಮಠಾದೀಶ್ವರರೂ ಈ ಸಂದರ್ಭದಲ್ಲಿ ಉಪಸ್ತಿತರಿದ್ದು, ಚಿತ್ರವನ್ನು ವೀಕ್ಷಿಸಿದರು.

ಅಮರಜ್ಯೋತಿ ಪಿಕ್ಚರ್ಸ್ ಸಂಸ್ಥೆಯಿಂದ, ಚಿತ್ರ ನಿರ್ಮಾಣವಾಗಿದ್ದು, ನಿರ್ಮಾಪಕರಾದ ಮಾಧವಾನಂದ ಯೊ ಶೇಗುಣಸಿ, ಚಿತ್ರ ನಟರಾದ ಶ್ರೀ ವಿಕ್ರಂ ಸೂರಿ, ರಘು ಭಟ್, ಶುಕ್ರ ಫಿಲಂಸ್ ಸೋಮಣ್ಣ, ಜಯಂತ್ ಹಾಗೂ ಇತರ ಪ್ರಮುಖರು ಸಹ ಉಪಸ್ತಿತರಿದ್ದರು.

 

 

 

ಗೃಹ ಸಚಿವರಾದ ಸನ್ಮಾನ್ಯ ಶ್ರೀ ಆರಗ ಜ್ಞಾನೇಂದ್ರ ರವರು ತಮ್ಮ ಸಾಮಾಜಿಕ ಕಳಕಳಿಯಿಂದ ಇಂತಹ ಸಮಾಜ ಸುಧಾರಕ ಹಾಗು ವಚನ ಸಾಹಿತ್ಯವನ್ನು ಬೆಳ್ಳಿ ತೆರೆಯ ಮೇಲೆ ತಂದಿರುವ ಚಿತ್ರತಂಡವನ್ನು ಶ್ಲಾಘಿಸಿದರು. ಇಂತಹ ಚಲನಚಿತ್ರಗಳು ಯುವ ಪೀಳಿಗೆ ನೋಡುವುದು ಅತ್ಯಂತ ಅವಶ್ಯಕ ಎಂದರು. ಚಿತ್ರ ಅತೀ ಸುಂದರ ಹಾಗು ನೈಜತೆಯಿಂದ ಮೂಡಿ ಬಂದಿದ್ದು. ಎಲ್ಲರೂ ವೀಕ್ಷಿಸಬೇಕೆಂದರು.
ನಾಡಿನ ಪೂಜ್ಯ ಮಠಾದೀಶ್ವರರು ಶ್ರೀ ಅಲ್ಲಮಪ್ರಭು ಚಲನಚಿತ್ರ ಅದ್ಬುತವಾಗಿ ಮೂಡಿ ಬಂದಿದ್ದು ಪ್ರಭುಲಿಂಗಲೀಲೆ ಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

Spread the love
Click to comment

Copyright © 2019 PopcornKannada.com