Cinema News
ಮದುವೆ ಬಳಿಕ ನಯನತಾರಾ ತೆಗೆದುಕೊಂಡು ನಿರ್ಧಾರದಿಂದ ನಿರಾಸೆಗೊಂಡ ಅಭಿಮಾನಿಗಳು
ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಇತ್ತೀಚೆಗೆ ನಿರ್ಮಾಪಕ ವಿಘ್ನೇಶ್ ಶಿವನ್ ಕೈ ಹಿಡಿದ್ದು ಪಡ್ಡೆ ಹುಡುಗರ ಹೃದಯಕ್ಕೆ ಕೊಳ್ಳಿ ಇಟ್ಟಿದ್ದ ನಟಿ ಇದೀಗ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ವಿಘ್ನೇಶ್ ಶಿವನ್ ಅವರನ್ನು ಮದುವೆಯಾದ ಬಳಿಕ ನಟನೆಗೆ ಸಂಬಂಧಿಸಿದಂತೆ ನಯನತಾರಾ ನಿರ್ಧಾರಗಳನ್ನು ತಗೆದುಕೊಂಡಿದ್ದು ಆಕೆಯ ಕೆಲ ನಿರ್ಧಾರಗಳಿಂದ ಅಭಿಮಾನಿಗಳ ಜೊತೆಗೆ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ನಿರಾಸೆ ಆಗಿದೆ.
ಲೇಡಿ ಸೂಪರ್ ಸ್ಟಾರ್ ನಯನತಾರಾ ಎಂಥ ಪಾತ್ರಗಳಿಗೂ ಹೇಳಿ ಮಾಡಿಸಿದ ನಟಿ. ಪವರ್ ಫುಲ್ ಪಾತ್ರಗಳಿಂದ ಹಿಡಿದು ರೊಮ್ಯಾಂಟಿಕ್, ಇಂಟಿಮೇಟ್, ಹೋಮ್ಲಿ ಹೀಗೆ ಪ್ರತಿಯೊಂದು ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡುವ ನಟಿ. ಆದ್ರೆ ಇನ್ಮುಂದೆ ಈ ರೀತಿಯ ಪಾತ್ರಗಳಲ್ಲಿ ಮತ್ತು ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ. ಹಾಗಂತ ಅಲ್ಲಿನ ನಿರ್ಮಾಪಕರಿಗೆ ಸಂದೇಶ ಕಳುಹಿಸಿರುವುದಾಗಿ ಸುದ್ದಿ ಹರಿದಾಡುತ್ತಿದೆ.
ಮದುವೆಯಾದ ಮಾರನೇ ದಿನವೇ ಪತಿ ವಿಘ್ನೇಶ್ ಜೊತೆ ತಿರುಪತಿಯ ಆವರಣದಲ್ಲಿ ಚಪ್ಪಲಿ ಧರಿಸಿ ಎಡವಟ್ಟು ಮಾಡಿಕೊಂಡಿದ್ದರು. ಇದರ ಜೊತೆಗೆ ದೇವಸ್ಥಾನದ ಇಳಗೆ ಕ್ಯಾಮೆರಾ ತೆಗೆದುಕೊಂಡು ಹೋಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಿಕ ಕ್ಷಮೆ ಯಾಚಿಸಿದ್ದರು.