Cinema News

ಅಭಿಮಾನಿಗಳ ಬೆಂಬಲಕ್ಕೆ ಫಿದಾ ಆದ ‘ಡಕಾಯಿತ್’ ತಂಡ

Published

on

ಬೆಂಗಳೂರುದಲ್ಲಿ ‘ಡಕಾಯತ್’ ಚಿತ್ರದ ಪ್ರಚಾರ ಜೋರಾಗಿ ನಡೆಯಿತು. ಅಡವಿ ಶೇಷ್ ಮತ್ತು ಅನುರಾಗ್ ಕಶ್ಯಪ್ ನಗರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಂಭ್ರಮ ಹಂಚಿಕೊಂಡರು. ಏಪ್ರಿಲ್ 10ರಂದು ಬಿಡುಗಡೆಯಾದ ಈ ತೆಲುಗು ಸಿನಿಮಾ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಚಿತ್ರದ ಯಶಸ್ಸಿಗೆ ಸಂತೋಷ ವ್ಯಕ್ತಪಡಿಸಿದ ತಂಡ, ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿತು.

 

 

 

 

 

 

ತಮ್ಮ ಸಿನಿಮಾಗಳಿಗೆ ಕನ್ನಡಿಗರು ಯಾವಾಗಲೂ ಬೆಂಬಲ ನೀಡಿರುವುದಾಗಿ ಅಡವಿ ಶೇಷ್ ಹೇಳಿದರು. ಬೆಂಗಳೂರಿನಲ್ಲಿ ಹಲವು ಬಾರಿ ಪ್ರಚಾರ ಮಾಡಿರುವುದಾಗಿ ಹೇಳಿಕೊಂಡ ಅವರು, ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ತಂಡ ನಗರದ ರಾಮೇಶ್ವರಂ ಕಫೆಯಲ್ಲಿ ಸಮಯ ಕಳೆಯುತ್ತಾ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಸಿನಿಮಾ ನೋಡಿದ ಎಲ್ಲರಿಗೂ ಧನ್ಯವಾದ ತಿಳಿಸಲಾಯಿತು.

 

 

 

 

 

ಅನುರಾಗ್ ಕಶ್ಯಪ್ ಮಾತನಾಡಿ, “ನಾನು ಈಗ ಬೆಂಗಳೂರಿನವನೇ” ಎಂದು ಹಾಸ್ಯವಾಗಿ ಹೇಳಿದರು. ಸಿನಿಮಾ 50 ಕೋಟಿ ಕಲೆಕ್ಷನ್ ದಾಟಿದ್ದು, ಟ್ರೇಲರ್ ನೋಡಿದರೆ ಮಾಸ್ ಸಿನಿಮಾ ಅನ್ನಿಸಬಹುದು, ಆದರೆ ಇದು ಒಳ್ಳೆಯ ಪ್ರೇಮಕಥೆಯ ಚಿತ್ರ ಎಂದರು. ನಂತರ ಜಿಟಿ ಮಾಲ್‌ನಲ್ಲಿ ಪ್ರೇಕ್ಷಕರನ್ನು ಭೇಟಿ ಮಾಡಿದ ತಂಡ ಸಂತೋಷ ಹಂಚಿಕೊಂಡಿತು. ಚಿತ್ರದಲ್ಲಿ ಮೃಣಾಲ್ ಠಾಕೂರ್, ಪ್ರಕಾಶ್ ರಾಜ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Spread the love

Copyright © 2019 PopcornKannada.com