Cinema News
ಅಂಜು ಚಿತ್ರಕ್ಕೆ ಮೊದಲ ಹಂತ ಚಿತ್ರೀಕರಣ ಮುಕ್ತಾಯ

ಟೆನ್ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಅಂಜು” ಚಲನಚಿತ್ರಕ್ಕೆ ಇತ್ತೀಚೆಗೆ ಚಿಂತಾಮಣಿಯ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಹೂರ್ತ ಸಮಾರಂಭ ನೆರವೇರಿತು ಖೇಲ್ ಚಲನಚಿತ್ರದ ನಿರ್ಮಾಪಕರಾದ ಮಾರ್ಕೆಟ್ ಸತೀಶ್ ಅವರು “ಅಂಜು” ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಅಲ್ಲದೆ ಲೆಕ್ಕಾಚಾರ ಚಲನಚಿತ್ರದ ನಿರ್ಮಾಪಕ ಆರ್.ಚಂದ್ರು, ಕ್ಯಾಮೆರಾ ಸ್ವಿಚ್ಆನ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.
ಬೆಂಗಳೂರಿನಿಂದ ಹೈದರಾಬಾದ್ಗೆ ಸಿನಿಮಾ ಆಡಿಷನ್ಗಾಗಿ ಪ್ರಯಾಣ ಬೆಳೆಸುವ ಮೂರು ಜನ ನಾಯಕನಟರು ಹಾಗು ಮೂವರು ನಾಯಕಿಯರು, ಈ ನಡುವೆ ಐದು ಮಂದಿ ಸೈಕೋಗಳ ಪ್ರವೇಶವಾಗಿ ಅವರಿಂದ ನಾಯಕ ಹಾಗು ನಾಯಕಿಗೆ ಆಗುವ ತೊಂದರೆಗಳೇನು ? ಅವುಗಳಿಂದ ಪಾರಾಗಲು ಅವರು ಮುಂದೆ ಪಡುವ ಕಷ್ಟಗಳೇನು ? ಎಂಬ ಕುತೂಹಲಕರ ಕಥಾಂಶವುಳ್ಳ ಈ ಚಿತ್ರದಲ್ಲಿ ಹಿರಿಯ ನಟ ಅಭಿಜಿತ್ ಹಾಗು ಜೂನಿಯರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಇನ್ನುಳಿದಂತೆ ನಾಯಕಿಯರಾಗಿ ಬಿಗ್ಬಾಸ್ ಬೆಡಗಿ ಸೋನು ಪಾಟೀಲ್, ರಮ್ಯ, ಯಶಸ್ಸಿನಿ, ನಾಯಕ ನಟರಾಗಿ ಊಲಿಬೆಲೆ ರಾಜೇಶ್ರೆಡ್ಡಿ, ರಾಜ್ಪ್ರತೀಕ್ ಹಾಗು ಸಿದ್ಧಾರ್ಥ ನಟಿಸುತ್ತಿದ್ದಾರೆ. ಖಳನಾಯಕನಾಗಿ ಬಾಂಬೆಯ ರಾಜೇಶ್ ಮುಂಡ್ಕೂರ್, ಆನಂದ್ ರಂಗ್ರೇಜï ನಟಿಸುತ್ತಿದ್ದು ಉಳಿದ ತಾರಾಗಣದಲ್ಲಿ ನರಸಾಪುರ ಭಕ್ತರಹಳ್ಳಿ ರವಿ, ರೇಣುಕಾ ಜೀವನ್ ಶಿವು ಅಬ್ದುಲ್ ರೆಹಮಾನ್ ಮೊದಲಾದವರು ನಟಿಸುತ್ತಿದ್ದಾರೆ.
ಅಂಜು ಚಲನಚಿತ್ರಕ್ಕೆ ರಾಜೀವ್ ಕೃಷ್ಣ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು. ವಿನು ಮನಸು ಅವರ ಸಂಗೀತ, ರಮೇಶ್ ಕೊಯಿರಾ ಅವರ ಛಾಯಾಗ್ರಹಣ, ಮಲ್ಲಿ ಅವರ ಸಂಕಲನ, ಸುರೇಶ್ ಕಂಬಳಿ ಅವರ ಸಾಹಿತ್ಯ, ಶಿವು ಅವರ ಸಾಹಸ, ನಾಗಸುಮಂತ್ ಅವರ ಸ್ಥಿರಚಿತ್ರಣ. ಭಕ್ತರಹಳ್ಳಿ ರವಿ ಅವರ ನಿರ್ಮಾಣ ನಿರ್ವಹಣೆಯಿದೆ ಈಗಾಗಲೇ ಚಿಕ್ಕಬಳ್ಳಾಪುರ ಚಿಂತಾಮಣಿ, ನಂದಿ ಗಿರಿದಾಮ ಮೊದಲಾದ ಸುಂದರ ತಾಣಗಳಲ್ಲಿ ಮೂದಲ ಹಂತದ ಚಿತ್ರೀಕರಣ ಮಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ, ಗಜೇಂದ್ರಗಡಕ್ಕೆ ಪ್ರಯಾಣ ಬೆಳಸಲಿದೆ.
Cinema News
ಸದ್ಯದಲ್ಲೇ ಬರಲಿದೆ “ಪ್ರೀತಿಯ ರಾಯಭಾರಿ” ಹುಡಗ ನಕುಲ್ ಅಭಿನಯದ ಹೊಸಚಿತ್ರ

Cinema News
ವಿಜಯ್ ರಾಘವೇಂದ್ರ ನಟನೆಯ ರಾಘು ಸಿನಿಮಾದ ಮುಹೂರ್ತ…ಅಣ್ಣನ ಸಿನಿಮಾಗೆ ತಮ್ಮ ಶ್ರೀಮುರಳಿ ಕ್ಲ್ಯಾಪ್

Cinema News
ಅಬ್ಬಾ ಲಾಟ್ರಿ….ಬೆಂಕಿ ಸಿನಿಮಾದ ಓಕೆನಾ ಸಾಂಗ್ ಗೆ ಹೆಜ್ಜೆ ಹಾಕಿ Iphone 13 ಗೆಲ್ಲಿ?

Cinema News
ಓಂಪ್ರಕಾಶ್ ರಾವ್ ಹಾಗೂ ಆದಿತ್ಯ ಕಾಂಬಿನೇಶನಲ್ಲಿ “ಇಲಾಖೆ”.

Cinema News
ಜೂನ್ ನಲ್ಲಿ “ರಾಜಮಾರ್ತಾಂಡ”ನ ಆಗಮನ. ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ ಧ್ರುವ ಸರ್ಜಾ.

-
Movie Reviews3 years ago
ವಿಕೇಂಡ್ಗೊಂದು ಮನ ಮುಟ್ಟುವ ಚಿತ್ರ – ವಿಮರ್ಶೆ – ರೇಟಿಂಗ್ – 3.25/5
-
Movie Reviews3 years ago
ರಾಮ್ ಜಾನುವಿನ ಮಧುರವಾದ ನೆನಪಿನ ಲವ್ಸ್ಟೋರಿ
-
Box Office2 years ago
ಮೂರು ದಿನಕ್ಕೆ “ಅವನೇ ಶ್ರೀಮನ್ನಾರಾಯಣ” ಗಳಿಸಿದ್ದು ಎಷ್ಟು ಕೋಟಿ?
-
Movie Reviews3 years ago
ಪಾರ್ವತಮ್ಮನ ಮಗಳಿಗೆ ಎಲ್ಲವೂ ಸಲೀಸು – ವಿಮರ್ಶೆ – ರೇಟಿಂಗ್ 3.5/5
-
Cinema News3 years ago
ಫಿಕ್ಸ್ ಆಯ್ತು ‘ಪೈಲ್ವಾನ್’ ಟ್ರೇಲರ್ ಬಿಡುಗಡೆ ದಿನಾಂಕ!
-
Box Office3 years ago
ಸ್ಯಾಂಡಲ್ ವುಡ್ ನಲ್ಲಿ ಸೋತ ಅಮ್ಮ – ಮಗ
-
Cinema News3 years ago
ಬಜಾರ್ ಧನ್ವೀರ್ಗೆ ಕಥೆ ಬರೆದ ಬಹದ್ದೂರ್ ಚೇತನ್
-
Reviews3 years ago
ದೆವ್ವಕ್ಕೂ ‘ಗಿಮಿಕ್’ ಮಾಡಿದ ಗಣೇಶ್ – ‘ಗಿಮಿಕ್’ ಟ್ರೇಲರ್ ವಿಮರ್ಶೆ
-
News3 years ago
‘ಗಟ್ಟಿಮೇಳ’ದ ಕ್ರಾಂತಿಯನ್ನು ನೇರವಾಗಿ ತರಲಿದೆ ”ಜೀ ಕನ್ನಡ”
-
News3 years ago
‘ನಾಯಕಿ’ಗೆ ಪ್ರಚಾರಕಿಯಾದ ನಟಿ ಹರಿಪ್ರಿಯಾ