Connect with us

Cinema News

ಶ್ರೀಮುರುಳಿ ಮುಂದಿನ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ನಿರ್ಮಾಪಕ

Published

on

ಶ್ರೀಮುರುಳಿ ವಿಷಯದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಗಳು ಹರಿದಾಡುತ್ತಿವೆ. ಈಗ ಹೊಸ ಸುದ್ದಿ ಏನಂದರೆ ಅವರು ನಟಿಸುವ ಮುಂದಿನ ಸಿನಿಮಾದ ನಿರ್ಮಾಪಕರು ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ .

 

 

ಹೌದು, ಪ್ರಶಾಂತ್‌ ನೀಲ್‌ ನಿರ್ಮಾಣದಲ್ಲಿ ಶ್ರೀಮುರುಳಿ ನಟಿಸುತ್ತಿದ್ದಾರೆ. ಜತೆಗೆ ಪ್ರಶಾಂತ್‌ ನೀಲ್‌ ಇದಕ್ಕೆ ಕಥೆಯನ್ನು ಒದಗಿಸುತ್ತಿದ್ದಾರೆ. ಈ ಚಿತ್ರವನ್ನು ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಡಾ. ಸೂರಿ ಲಕ್ಕಿ ಸಿನಿಮಾದ ನಂತರ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿರಲಿಲ್ಲ. ಯಶ್‌ ಜತೆ ಓಡಾಡಿಕೊಂಡು ಇದ್ದರು. ಈಗ ಪ್ರಶಾಂತ್‌ ನೀಲ್‌ ಕಥೆಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮಧ್ಯೆ ಮಹೇಶ್‌ಕುಮಾರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಕಥೆಯೇನು ಎಂಬುದು ಗೊತ್ತಾಗುತ್ತಿಲ್ಲ. ಮಹೇಶ್‌ ನಿರ್ದೇಶನದ ಸಿನಿಮಾದ ಕಥೆ ಮತ್ತು ಟೈಟಲ್‌ ಎಲ್ಲವೂ ಬದಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿತ್ತು. ಈಗ ಆ ಸಿನಿಮಾವೇ ಮುಂದಕ್ಕೆ ಹೋಗಿದೆ ಎನ್ನುತ್ತಿವೆ ಮೂಲಗಳು.

 

 

ಇನ್ನೊಂದು ಬಲ್ಲ ಮೂಲಗಳ ಪ್ರಕಾರ ಈ ಮಹೇಶ್‌ ಚಿತ್ರದ ನಂತರ ಪ್ರಶಾಂತ್ ನೀಲ್‌ ಕಥೆಯ ಸಿನಿಮಾ ಆರಂಭವಾಗುತ್ತದೆ. ಈ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಜತೆ 6-5=2 ಚಿತ್ರದ ನಿರ್ಮಾಪಕರಾದ ಕೃಷ್ಣ ಚೈತನ್ಯ ಅವರೂ ಸಹ ಬಂಡವಾಳ ಹೂಡುತ್ತಿದ್ದಾರೆ. ಇದು ಶ್ರೀಮುರುಳಿಯ ಹುಟ್ಟು ಹಬ್ಬ ಡಿ 17ಕ್ಕೆ ಅನೌನ್ಸ್‌ ಆಗಲಿದೆ. ಒಟ್ಟಿನಲ್ಲಿ ಭರಾಟೆಯ ನಂತರ ಶ್ರೀಮುರುಳಿ ಕರಿಯರ್‌ನಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳಾಗುತ್ತಿವೆ.

Spread the love

ಶ್ರೀಮುರುಳಿ ವಿಷಯದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಗಳು ಹರಿದಾಡುತ್ತಿವೆ. ಈಗ ಹೊಸ ಸುದ್ದಿ ಏನಂದರೆ ಅವರು ನಟಿಸುವ ಮುಂದಿನ ಸಿನಿಮಾದ ನಿರ್ಮಾಪಕರು ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ .

 

 

ಹೌದು, ಪ್ರಶಾಂತ್‌ ನೀಲ್‌ ನಿರ್ಮಾಣದಲ್ಲಿ ಶ್ರೀಮುರುಳಿ ನಟಿಸುತ್ತಿದ್ದಾರೆ. ಜತೆಗೆ ಪ್ರಶಾಂತ್‌ ನೀಲ್‌ ಇದಕ್ಕೆ ಕಥೆಯನ್ನು ಒದಗಿಸುತ್ತಿದ್ದಾರೆ. ಈ ಚಿತ್ರವನ್ನು ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಡಾ. ಸೂರಿ ಲಕ್ಕಿ ಸಿನಿಮಾದ ನಂತರ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿರಲಿಲ್ಲ. ಯಶ್‌ ಜತೆ ಓಡಾಡಿಕೊಂಡು ಇದ್ದರು. ಈಗ ಪ್ರಶಾಂತ್‌ ನೀಲ್‌ ಕಥೆಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮಧ್ಯೆ ಮಹೇಶ್‌ಕುಮಾರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಕಥೆಯೇನು ಎಂಬುದು ಗೊತ್ತಾಗುತ್ತಿಲ್ಲ. ಮಹೇಶ್‌ ನಿರ್ದೇಶನದ ಸಿನಿಮಾದ ಕಥೆ ಮತ್ತು ಟೈಟಲ್‌ ಎಲ್ಲವೂ ಬದಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿತ್ತು. ಈಗ ಆ ಸಿನಿಮಾವೇ ಮುಂದಕ್ಕೆ ಹೋಗಿದೆ ಎನ್ನುತ್ತಿವೆ ಮೂಲಗಳು.

 

 

ಇನ್ನೊಂದು ಬಲ್ಲ ಮೂಲಗಳ ಪ್ರಕಾರ ಈ ಮಹೇಶ್‌ ಚಿತ್ರದ ನಂತರ ಪ್ರಶಾಂತ್ ನೀಲ್‌ ಕಥೆಯ ಸಿನಿಮಾ ಆರಂಭವಾಗುತ್ತದೆ. ಈ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಜತೆ 6-5=2 ಚಿತ್ರದ ನಿರ್ಮಾಪಕರಾದ ಕೃಷ್ಣ ಚೈತನ್ಯ ಅವರೂ ಸಹ ಬಂಡವಾಳ ಹೂಡುತ್ತಿದ್ದಾರೆ. ಇದು ಶ್ರೀಮುರುಳಿಯ ಹುಟ್ಟು ಹಬ್ಬ ಡಿ 17ಕ್ಕೆ ಅನೌನ್ಸ್‌ ಆಗಲಿದೆ. ಒಟ್ಟಿನಲ್ಲಿ ಭರಾಟೆಯ ನಂತರ ಶ್ರೀಮುರುಳಿ ಕರಿಯರ್‌ನಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳಾಗುತ್ತಿವೆ.

Spread the love
Continue Reading
Click to comment

Leave a Reply

Your email address will not be published. Required fields are marked *