News
‘ಗಟ್ಟಿಮೇಳ’ದ ಕ್ರಾಂತಿಯನ್ನು ನೇರವಾಗಿ ತರಲಿದೆ ”ಜೀ ಕನ್ನಡ”

ಪ್ರಸ್ತುತ ತಾಜಾ ಮತ್ತು ಹೊಸ ವಿಷಯ ನೀಡುವ ದೃಢವಾದ ಬದ್ಧತೆಯೊಂದಿಗೆ ವಿಶ್ವಾದ್ಯಂತ ಲಕ್ಷಗಟ್ಟಲೆ ಕನ್ನಡ ವೀಕ್ಷಕರ ಹೃದಯಕ್ಕೆ ಸಂಪರ್ಕಿಸುತ್ತಿರುವ, ಪ್ರಮುಖ ಕನ್ನಡ ಸಾಮಾನ್ಯ ಮನರಂಜನಾ ಚಾನೆಲ್, ಜೀ ಕನ್ನಡ, ರಾಯಚೂರಿನ ಮಹಾತ್ಮಾ ಗಾಂಧಿ ಸ್ಟೇಡಿಯಂನಲ್ಲಿ ಜೂನ್ 22 ರಂದು 20,000 ಕ್ಕೂ ಅಧಿಕ ಅಭಿಮಾನಿಗಳನ್ನು ರಂಜಿಸುವ ವಿಶೇಷವಾದ ಸಮಾರಂಭ, ಗಟ್ಟಿಮೇಳ ಜಾತ್ರೆ ಬಗ್ಗೆ ಘೋಷಿಸಿದೆ.
ಗಟ್ಟಿಮೇಳದ ಪ್ರಮುಖ ನಟ ನಟಿಯರಿಂದ ಅದ್ಭುತ ಸಾಮರ್ಥ್ಯ ಮತ್ತು ಸ್ಥಳದಲ್ಲಿ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಸಮಾರಂಭ ಜೀ ಕನ್ನಡ ಮತ್ತು ಜೀ ಕನ್ನಡ ಹೆಚ್ ಡಿ ಯಲ್ಲಿ ಭಾನುವಾರ ಜುಲೈ 7 ರಂದು ಮಧ್ಯಾಹ್ನ 3:00ಕ್ಕೆ ಪ್ರಸಾರವಾಗಲಿದೆ.
ಗಟ್ಟಿಮೇಳದ ಕಥೆ ಅಡೆತಡೆಗಳನ್ನು ಎದುರಿಸುವ, ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಹಿಳೆ, ತನ್ನ ನಾಲ್ಕು ಹೆಣ್ಣುಮಕ್ಕಳು ಧಾರ್ಮಿಕ ಆಚರಣೆಗಳ ಭಾಗವಾಗುವುದನ್ನು ನೋಡುವ ದೊಡ್ಡ ಕನಸನ್ನು ಕಾಣುವ ಮಹಿಳೆಯ ಹೋರಾಟವನ್ನು ತೋರಿಸುತ್ತದೆ. ಜೀ ಕನ್ನಡ ರಾಯಚೂರಿನ ನಿವಾಸಿಗಳೊಂದಿಗೆ ಬೆಳಿಗ್ಗೆ 3 ಕಿಮೀ ಮೆರವಣಿಗೆಯ ಮೂಲಕ ಆಚರಿಸಿತು.
ಗಟ್ಟಿಮೇಳದ ಕಲಾವಿದರು ರಾಯಚೂರಿನ ಸ್ಥಳಗಳಿಂದ ಕರಪತ್ರಗಳಲ್ಲಿ ನಿವಾಸಿಗಳನ್ನು ವೈಯಕ್ತಿಕವಾಗಿ ಆಹ್ವಾನಿಸಿತು. ಕಲಾವಿದರು ಸ್ಥಳೀಯ ಆಹಾರದ ರುಚಿ ನೋಡುವ ಮತ್ತು ರಾಯಚೂರಿನ ಬೀದಿಗಳಲ್ಲಿ ಅಭಿಮಾನಿಗಳೊಂದಿಗೆ ನರ್ತಿಸುವ ಅವಕಾಶ ಪಡೆದರು. ಗಟ್ಟಿಮೇಳ ತಂಡ ಜಾತ್ರೆ ಆರಂಭಕ್ಕೆ ಮೊದಲು ಆಶೀರ್ವಾದಕ್ಕಾಗಿ ಮಂತ್ರಾಲಯದ ಜನಪ್ರಿಯ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ರಾಯಚೂರಿನ ಜನತೆಗಾಗಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭವನ್ನು ನಿರೂಪಕಿ ಅನುಶ್ರೀ ನಿರೂಪಿಸಿದ್ದು, ಗಟ್ಟಿಮೇಳ ತಂಡದ ಅದ್ಭುತ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಸಾಕ್ಷಿಯಾದರು. ವೇದಾಂತ್ ವಸಿಷ್ಟ ಮತ್ತು ಅಮೂಲ್ಯರವರ ಸೋಲೋ ಕಾರ್ಯಕ್ರಮ ರಾತ್ರಿಯ ಮನರಂಜನಾ ಸಮಯಕ್ಕೆ ಕಳೆ ನೀಡಿತ್ತು. ಪ್ರೇಕ್ಷಕರು, ಗಟ್ಟಿಮೇಳ ಧಾರಾವಾಹಿಗೆ ಸಂಬಂಧಿಸಿದ ಪ್ರಶ್ನೆಗಳೊಂದಿಗೆ, ಅನುಶ್ರೀ ಆಯೋಜಿಸಿದ ಮನರಂಜನಾ ಆಟಗಳನ್ನು ಆನಂದಿಸಿದರು.
ಜಾತ್ರೆ ದಿವಂಗತ ನರಸಿಂಹರಾಜು ರವರಿಗೆ ಧನ್ಯವಾದ ಅರ್ಪಿಸುವುದನ್ನೂ ಒಳಗೊಂಡಿತ್ತು, ಗಟ್ಟಿಮೇಳದ ಪ್ರಮುಖ ಪಾತ್ರಧಾರಿಯಾದ ಸುಧಾನರಸಿಂಹರಾಜು ಅವರ ಪುತ್ರಿಯಾಗಿದ್ದಾರೆ. ನರಸಿಂಹರಾಜು ಕನ್ನಡ ಮನರಂಜನಾ ಉದ್ದಿಮೆಯಲ್ಲಿ ಅದ್ಭುತ ಹಾಸ್ಯನಟರಾಗಿದ್ದಾರೆ; ಅವರು ಕರ್ನಾಟಕದ ಚಾರ್ಲಿ ಚಾಪ್ಲಿನ್ ಎಂದೇ ಜನಪ್ರಿಯರಾಗಿದ್ದಾರೆ. ಈ ಅವಿಸ್ಮರಣೀಯ ಗೌರವಕ್ಕೆ ಗಟ್ಟಿಮೇಳ ಜಾತ್ರೆಯಲ್ಲಿ ಪ್ರೇಕ್ಷಕರಿಂದ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಯಿತು.
