Cinema News
‘ಕೃಷ್ಣ ಟಾಕೀಸ್’ ಓನರ್ ಆದ ಅಜಯ್ರಾವ್
ಕೃಷ್ಣ ಪಾತ್ರದ ಮೂಲಕ ಫೇಮಸ್ ಆಗಿದ್ದ ನಟ ಅಜಯ್ರಾವ್ ಈಗ ಐದನೇ ಬಾರಿಗೆ ಕೃಷ್ಣ ಎಂಬ ಟೈಟಲ್ ಇರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಹಿಂದೆ ಕೃಷ್ಣನ್ ಲವ್ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ, ಕೃಷ್ಣ ರುಕ್ಕು ಸಿನಿಮಾಗಳಲ್ಲಿ ಅಜಯ್ರಾವ್ ಕೃಷ್ಣನಾಗಿ ನಟಿಸಿದ್ದರು, ಈಗ ಮತ್ತೆ ‘ಕೃಷ್ಣ ಟಾಕೀಸ್’ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.
ಈ ಬಾರಿ ಅವರು ವಿಜಯಾನಂದ ಎಂಬುವವರ ನಿರ್ದೇಶನದಲ್ಲಿ ಕೃಷ್ಣನಾಗಿದ್ದಾರೆ. ಈ ಚಿತ್ರದಲ್ಲಿ ಅಜಯ್ಗೆ ಅಪೂರ್ವ ಮತ್ತು ಸಿಂಧು ಲೋಕನಾಥ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ.
ಬುಧವಾರ ಚಿತ್ರಕ್ಕೆ ಮುಹೂರ್ತವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಅಜಯ್ರಾವ್ ಗೆ ಈ ಬಾರಿಯೂ ಕೃಷ್ಣ ಎಂಬ ಹೆಸರು ಲಕ್ ತಂದುಕೊಡಲಿದೆಯಾ ಕಾದು ನೋಡಬೇಕಿದೆ.
Continue Reading