News
‘ಗಟ್ಟಿಮೇಳ’ದ ಕ್ರಾಂತಿಯನ್ನು ನೇರವಾಗಿ ತರಲಿದೆ ”ಜೀ ಕನ್ನಡ”

ಪ್ರಸ್ತುತ ತಾಜಾ ಮತ್ತು ಹೊಸ ವಿಷಯ ನೀಡುವ ದೃಢವಾದ ಬದ್ಧತೆಯೊಂದಿಗೆ ವಿಶ್ವಾದ್ಯಂತ ಲಕ್ಷಗಟ್ಟಲೆ ಕನ್ನಡ ವೀಕ್ಷಕರ ಹೃದಯಕ್ಕೆ ಸಂಪರ್ಕಿಸುತ್ತಿರುವ, ಪ್ರಮುಖ ಕನ್ನಡ ಸಾಮಾನ್ಯ ಮನರಂಜನಾ ಚಾನೆಲ್, ಜೀ ಕನ್ನಡ, ರಾಯಚೂರಿನ ಮಹಾತ್ಮಾ ಗಾಂಧಿ ಸ್ಟೇಡಿಯಂನಲ್ಲಿ ಜೂನ್ 22 ರಂದು 20,000 ಕ್ಕೂ ಅಧಿಕ ಅಭಿಮಾನಿಗಳನ್ನು ರಂಜಿಸುವ ವಿಶೇಷವಾದ ಸಮಾರಂಭ, ಗಟ್ಟಿಮೇಳ ಜಾತ್ರೆ ಬಗ್ಗೆ ಘೋಷಿಸಿದೆ.
ಗಟ್ಟಿಮೇಳದ ಪ್ರಮುಖ ನಟ ನಟಿಯರಿಂದ ಅದ್ಭುತ ಸಾಮರ್ಥ್ಯ ಮತ್ತು ಸ್ಥಳದಲ್ಲಿ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಸಮಾರಂಭ ಜೀ ಕನ್ನಡ ಮತ್ತು ಜೀ ಕನ್ನಡ ಹೆಚ್ ಡಿ ಯಲ್ಲಿ ಭಾನುವಾರ ಜುಲೈ 7 ರಂದು ಮಧ್ಯಾಹ್ನ 3:00ಕ್ಕೆ ಪ್ರಸಾರವಾಗಲಿದೆ.
ಗಟ್ಟಿಮೇಳದ ಕಥೆ ಅಡೆತಡೆಗಳನ್ನು ಎದುರಿಸುವ, ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಹಿಳೆ, ತನ್ನ ನಾಲ್ಕು ಹೆಣ್ಣುಮಕ್ಕಳು ಧಾರ್ಮಿಕ ಆಚರಣೆಗಳ ಭಾಗವಾಗುವುದನ್ನು ನೋಡುವ ದೊಡ್ಡ ಕನಸನ್ನು ಕಾಣುವ ಮಹಿಳೆಯ ಹೋರಾಟವನ್ನು ತೋರಿಸುತ್ತದೆ. ಜೀ ಕನ್ನಡ ರಾಯಚೂರಿನ ನಿವಾಸಿಗಳೊಂದಿಗೆ ಬೆಳಿಗ್ಗೆ 3 ಕಿಮೀ ಮೆರವಣಿಗೆಯ ಮೂಲಕ ಆಚರಿಸಿತು.
ಗಟ್ಟಿಮೇಳದ ಕಲಾವಿದರು ರಾಯಚೂರಿನ ಸ್ಥಳಗಳಿಂದ ಕರಪತ್ರಗಳಲ್ಲಿ ನಿವಾಸಿಗಳನ್ನು ವೈಯಕ್ತಿಕವಾಗಿ ಆಹ್ವಾನಿಸಿತು. ಕಲಾವಿದರು ಸ್ಥಳೀಯ ಆಹಾರದ ರುಚಿ ನೋಡುವ ಮತ್ತು ರಾಯಚೂರಿನ ಬೀದಿಗಳಲ್ಲಿ ಅಭಿಮಾನಿಗಳೊಂದಿಗೆ ನರ್ತಿಸುವ ಅವಕಾಶ ಪಡೆದರು. ಗಟ್ಟಿಮೇಳ ತಂಡ ಜಾತ್ರೆ ಆರಂಭಕ್ಕೆ ಮೊದಲು ಆಶೀರ್ವಾದಕ್ಕಾಗಿ ಮಂತ್ರಾಲಯದ ಜನಪ್ರಿಯ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ರಾಯಚೂರಿನ ಜನತೆಗಾಗಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭವನ್ನು ನಿರೂಪಕಿ ಅನುಶ್ರೀ ನಿರೂಪಿಸಿದ್ದು, ಗಟ್ಟಿಮೇಳ ತಂಡದ ಅದ್ಭುತ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಸಾಕ್ಷಿಯಾದರು. ವೇದಾಂತ್ ವಸಿಷ್ಟ ಮತ್ತು ಅಮೂಲ್ಯರವರ ಸೋಲೋ ಕಾರ್ಯಕ್ರಮ ರಾತ್ರಿಯ ಮನರಂಜನಾ ಸಮಯಕ್ಕೆ ಕಳೆ ನೀಡಿತ್ತು. ಪ್ರೇಕ್ಷಕರು, ಗಟ್ಟಿಮೇಳ ಧಾರಾವಾಹಿಗೆ ಸಂಬಂಧಿಸಿದ ಪ್ರಶ್ನೆಗಳೊಂದಿಗೆ, ಅನುಶ್ರೀ ಆಯೋಜಿಸಿದ ಮನರಂಜನಾ ಆಟಗಳನ್ನು ಆನಂದಿಸಿದರು.
ಜಾತ್ರೆ ದಿವಂಗತ ನರಸಿಂಹರಾಜು ರವರಿಗೆ ಧನ್ಯವಾದ ಅರ್ಪಿಸುವುದನ್ನೂ ಒಳಗೊಂಡಿತ್ತು, ಗಟ್ಟಿಮೇಳದ ಪ್ರಮುಖ ಪಾತ್ರಧಾರಿಯಾದ ಸುಧಾನರಸಿಂಹರಾಜು ಅವರ ಪುತ್ರಿಯಾಗಿದ್ದಾರೆ. ನರಸಿಂಹರಾಜು ಕನ್ನಡ ಮನರಂಜನಾ ಉದ್ದಿಮೆಯಲ್ಲಿ ಅದ್ಭುತ ಹಾಸ್ಯನಟರಾಗಿದ್ದಾರೆ; ಅವರು ಕರ್ನಾಟಕದ ಚಾರ್ಲಿ ಚಾಪ್ಲಿನ್ ಎಂದೇ ಜನಪ್ರಿಯರಾಗಿದ್ದಾರೆ. ಈ ಅವಿಸ್ಮರಣೀಯ ಗೌರವಕ್ಕೆ ಗಟ್ಟಿಮೇಳ ಜಾತ್ರೆಯಲ್ಲಿ ಪ್ರೇಕ್ಷಕರಿಂದ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಯಿತು.
Cinema News
ಫೆ. 26ಕ್ಕೆ ಹಾರರ್ ಥ್ರಿಲ್ಲರ್ “ಸ್ಕೇರಿ ಫಾರೆಸ್ಟ್” ಬಿಡುಗಡೆ*

News
ಕಾವ್ಯಾಂಜಲಿ “ಲವ್ ಇನ್ ಗೋವಾ”

Cinema News
ಟೀನೇಜರ್ಸ್ ಒಡನಾಟ , ತೊಳಲಾಟ, ನರಳಾಟವೇ “MBA”

Cinema News
ಸಿಂಬು ನಟನೆಯ ‘ರಿವೈಂಡ್’ ಶೀರ್ಷಿಕೆ ಬದಲಾವಣೆ

Cinema News
ನಿಮ್ಮೂರಲ್ಲಿ ಹಾಡುಗಳ ಸಂಭ್ರಮ ಸಡಗರ

-
Box Office1 year ago
ಮೂರು ದಿನಕ್ಕೆ “ಅವನೇ ಶ್ರೀಮನ್ನಾರಾಯಣ” ಗಳಿಸಿದ್ದು ಎಷ್ಟು ಕೋಟಿ?
-
Movie Reviews2 years ago
ರಾಮ್ ಜಾನುವಿನ ಮಧುರವಾದ ನೆನಪಿನ ಲವ್ಸ್ಟೋರಿ
-
Movie Reviews2 years ago
ಪಾರ್ವತಮ್ಮನ ಮಗಳಿಗೆ ಎಲ್ಲವೂ ಸಲೀಸು – ವಿಮರ್ಶೆ – ರೇಟಿಂಗ್ 3.5/5
-
Cinema News2 years ago
ಫಿಕ್ಸ್ ಆಯ್ತು ‘ಪೈಲ್ವಾನ್’ ಟ್ರೇಲರ್ ಬಿಡುಗಡೆ ದಿನಾಂಕ!
-
Box Office2 years ago
ಸ್ಯಾಂಡಲ್ ವುಡ್ ನಲ್ಲಿ ಸೋತ ಅಮ್ಮ – ಮಗ
-
Cinema News2 years ago
ಬಜಾರ್ ಧನ್ವೀರ್ಗೆ ಕಥೆ ಬರೆದ ಬಹದ್ದೂರ್ ಚೇತನ್
-
Reviews2 years ago
ದೆವ್ವಕ್ಕೂ ‘ಗಿಮಿಕ್’ ಮಾಡಿದ ಗಣೇಶ್ – ‘ಗಿಮಿಕ್’ ಟ್ರೇಲರ್ ವಿಮರ್ಶೆ
-
News2 years ago
‘ನಾಯಕಿ’ಗೆ ಪ್ರಚಾರಕಿಯಾದ ನಟಿ ಹರಿಪ್ರಿಯಾ
-
Cinema News2 years ago
‘ಸಲಗ’ಕ್ಕೆ ದುನಿಯಾ ವಿಜಯ್ ನಿರ್ದೇಶಕ – Exclusive
-
Cinema News2 years ago
ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮಿಂಚುತ್ತಿರುವ ಕನ್ನಡದ “ಗಂಟು ಮೂಟೆ”